ಶ್ರೀ ದೊಡ್ಡಾದೇವರ ದೇವಸ್ಥಾನದಲ್ಲಿ ಒಂದು ದಿನ ನಿರಂತರ ನಿಂತು ಭಜನೆಗೆ ಚಾಲನೆ : ತೆಗ್ಗಿನಮಠ ಶಾಸ್ತಿಗಳು

Ravi Talawar
ಶ್ರೀ ದೊಡ್ಡಾದೇವರ ದೇವಸ್ಥಾನದಲ್ಲಿ ಒಂದು ದಿನ ನಿರಂತರ ನಿಂತು ಭಜನೆಗೆ ಚಾಲನೆ : ತೆಗ್ಗಿನಮಠ ಶಾಸ್ತಿಗಳು
WhatsApp Group Join Now
Telegram Group Join Now
ಬೈಲಹೊಂಗಲ- ಪಟ್ಟಣದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ದೊಡ್ಡಾದೇವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ಯ ಒಂದು ದಿನಗಳ ಕಾಲ ನಿರಂತರ ನಿಂತು ಭಜನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರೀಗಳು ಹೇಳಿದರು.
             ಪಟ್ಟಣದ ಶ್ರೀ ದೊಡ್ಡಾದೇವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ ಶ್ರೀ ದೊಡ್ಡಾದೇವರ ಜಾತ್ರಾ ಮಹೋತ್ಸವವು 2 ದಿನಗಳ ಕಾಲ ನಡೆಯಲಿದೆ.
             ಇಂದು (ಜೂ.30) ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದೊಡ್ಡದೇವರಿಗೆ ಅಭಿಷೇಕ, 10 ಗಂಟೆಗೆ ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯದಲ್ಲಿ ವರ್ಷ ಪದ್ಧತಿಯಂತೆ ವರುಣನ ಕೃಪೆಗಾಗಿ ಒಂದು ದಿನ ನಿರಂತರ ನಿಂತು ಭಜನೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
         ಜು.1 ರಂದು ಮುಂಜಾನೆ ರುದ್ರಾಭಿಷೇಕ,ವಿವಿಧ ಪುಷ್ಪಗಳಿಂದ ಅಲಂಕಾರ, ಹೋಮ,ಹವನ ಸೇರಿದಂತೆ ಅನೇಕ ದೈವಿಕ ಕಾರ್ಯಕ್ರಮ,10 ಗಂಟೆಗೆ ಭಜನೆಯ ಮುಕ್ತಾಯ, ಮದ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಸೇವೆ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಭಗವಂತನ ಕೃಪಶೀರ್ವಾದ ಕ್ಕೆ ಪಾತ್ರರಾಗುವಂತೆ ಕರೆ ನೀಡಿದರು.
            ವೇ.ಮೂ.ಸದಾಶಿವಯ್ಯಾ ತೆಗ್ಗಿಮಠ ಶಾಸ್ತ್ರಿಗಳು,
ಮುಖಂಡರಾದ ಪಾಂಡಪ್ಪ ಇಂಚಲ,ಶಿವಪ್ಪ ಲಿಂಬೆನ್ನವರ,ಬಸಪ್ಪ ಜಂಬಗಿ,ಅಶೋಕ ಮತ್ತಿಕೊಪ್ಪ,ರವಿ ಪಿರಗೋಜಿ, ಗೋಪಾಲ ಮಾಳೋದೆ,ಶ್ರೀಕಾಂತ ಮತ್ತಿಕೊಪ್ಪ,ಅದೃಶ್ಯ ಹುಚ್ಚನವರ,ಉಳವಪ್ಪ ಹಲಕಿ,ನಾಗೇಶ ಕೋಟಗಿ,ಮಹಾಂತೇಶ ಮಲ್ಲಾಪುರ,ಬಾಬು ಮಿರಜಕರ ಸೇರಿದಂತೆ ಶ್ರೀ ದೊಡ್ಡದೇವರ ದೇವಸ್ಥಾನ ಕಮಿಟಿ ಹಾಗೂ ಭಜನಾ ಮಂಡಳಿಯ ಸದಸ್ಯರು ಇದ್ದರು.
WhatsApp Group Join Now
Telegram Group Join Now
Share This Article