ಗದ್ದಿಕೆರೆಯಲ್ಲಿ ಈಜಲು ಹೋಗಿ ಬಾಲಕ ಮೃತ

Ravi Talawar
ಗದ್ದಿಕೆರೆಯಲ್ಲಿ ಈಜಲು ಹೋಗಿ ಬಾಲಕ ಮೃತ
WhatsApp Group Join Now
Telegram Group Join Now

ಎಂ. ಕೆ. ಹುಬ್ಬಳ್ಳಿ :ಕೆರೆಯಲ್ಲಿ ಈಜಲು ಹೋಗಿ ಓರ್ವ ಮೃತ ಪಟ್ಟ ಘಟನೆ ರವಿವಾರ ಸಂಭವಿಸಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಗದ್ದಿಕೆರೆಗೆ ರವಿವಾರ ಸಾಯಂಕಾಲ ಈಜಲು ಹೊಂದ ಪಟ್ಟಣದ ಗಾಂಧಿ ನಗರದ ನಿವಾಸಿ ಮಹಮ್ಮದಸಾಬ ಇಬ್ರಾಹಿಂ ನಗಾರಸಿ (15) ಮೃತ ದುರ್ದೈವಿ. ಈತ ರವಿವಾರ ಸಾಯಂಕಾಲ ಗದ್ದಿಕೆರೆಗೆ ಈಜಲು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸೋಮವಾರ ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ಆಗಮಿಸಿ ಸ್ಥಳಿಯ ಯುವಕರಾದ ಜಕರುಲ್ಲಾ ಬಂಕಪೂರ, ಅಕ್ಬರ ಜರಪಟ್ಟಗಿ ಸಹಾಯ ಪಡೆದು ಎಸ್. ಡಿ. ಆರ್. ಎಫ್ ತಂಡ ಸ್ಥಳಕ್ಕೆ ಆಗಮಿಸುತ್ತಿದಂತೆ ಮೃತ ದೇಹ ನೀರಿನಿಂದ ಹೊರ ತೆಗೆದರು.

ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪಿಎಸ್ ಅಯ್ ಪ್ರವೀಣ ಗಂಗೋಳಿ ಬೆಟ್ಟಿ ನೀಡಿ ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article