ನೇಸರಗಿ.ಗ್ರಾಮಗಳಲ್ಲಿ ಎಲ್ಲ ತರಹದ ಕಾಳು , ತರಕಾರಿ, ಬಟ್ಟೆ ಬರೇ ವ್ಯಾಪಾರ, ವಹಿವಾಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಸಮೀಪದ ಮುರಕೀಭಾವಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆಯವರೆಗೆ ಪ್ರತಿ ಶನಿವಾರ ವಾರಕ್ಕೊಮ್ಮೆ ಜರುಗುವ ಪ್ರಥಮ ಸಂತೆಯನ್ನು ಪರಮ ಪೂಜ್ಯ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ಪೂಜೆ ಮಾಡುವುದರ ಮುಖಾಂತರ ಅವರ ಅಮೃತ ಹಸ್ತದಿಂದ ಸಂತೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಈರನಗೌಡ ದೊಡ್ಡಗೌಡರ, ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಶಿವಾನಂದ ಪಾಟೀಲ, ಅಡಿವೆಪ್ಪ ಮೋದಗಿ, ಹಿರಿಯರಾದ ಶಿವಲಿಂಗಪ್ಪ ಶಿವಬಸವನವರ, ಗಂಗಪ್ಪ ಮಲ್ಲಾರಿ, ಈಶ್ವರ ಮಿಡಕನಹಟ್ಟಿ, ಸೋಮಪ್ಪ ಮಲ್ಲಾರಿ ರಾಯಿನಾಯ್ಕ ನಾಯ್ಕರ, ದೊಡ್ಡಗೌಡ ಪಾಟೀಲ, ಶಿವರುದ್ರಪ್ಪ ಉಡಿಕೇರಿ, ರುದ್ರಪ್ಪ ಸಾವಳಗಿ, ಬಸಯ್ಯ ಸುಂಕದ, ಶಿಕ್ಷಕರಾದ ಅರ್ಜುನ ಕೊನಿನ್ನವರ, ಅಡಿವೆಪ್ಪ ಉಳವಿ, ಸಿದ್ದರಾಮ ಉಳವಿ ಸೇರಿದಂತೆ ಮುರಕಿಬಾವಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು, ರೈತರು, ಅನೇಕ ಭಾಗಗಳಿಂದ ಬಂದ ವ್ಯಾಪಾರಸ್ಥರು ಉಪಸ್ಥಿತರಿದ್ದರು.