ನರೇಗಾ ಕೂಲಿ ಕಾರ್ಮಿಕನಿಗೆ ಹೃದಯಾಘಾತ ಸ್ಥಳದಲ್ಲೇ ಸಾವು

Ravi Talawar
ನರೇಗಾ ಕೂಲಿ ಕಾರ್ಮಿಕನಿಗೆ ಹೃದಯಾಘಾತ ಸ್ಥಳದಲ್ಲೇ ಸಾವು
WhatsApp Group Join Now
Telegram Group Join Now
ಬೈಲಹೊಂಗಲ,22: ಸಮೀಪದ ಒಕ್ಕುಂದ ಗ್ರಾಮದ  ಮಲ್ಲೇಶ ಲಕ್ಷ್ಮಣ ಸಂಬರಗಿ ಬೆಳಿಗ್ಗೆ 7 ಗಂಟೆಗೆ ನರೆಗಾ ಕೆಲಸಕ್ಕೆ ತೆರಳಿದಾಗ ಮುಂಜಾನೆ 9  ಗಂಟೆಗೆ ತಿವ್ರ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರಿಗೆ 3ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನಿದ್ದಾನೆ. ಮೃತನ ಸಾವಿನಿಂದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಘಟನಾ ಸ್ಥಳಕ್ಕೆ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತನ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ದೊರಕಿಸುವ ಭರವಸೆ ನೀಡಿದರು.
WhatsApp Group Join Now
Telegram Group Join Now
Share This Article