ಬಳ್ಳಾರಿ, ಜೂ.26: ನಗರದ 3ನೇ ವಾರ್ಡಿನ ವ್ಯಾಪ್ತಿಯ ಲಾಲ ಕಮಾನ್’ನ ವಿ.ಎನ್. ಬೀದಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕಟ್ಟಡದ ಮರು ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಮಧ್ಯಾಹ್ನ ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಅವರು ಶಾಲೆಗೆ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು.
ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆದ ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂದಾಜು 1 ಕೋಟಿ ರೂ.ಗಳ ವೆಚ್ಚದಲ್ಲಿ ಶಾಲಾ ಕಟ್ಟಡದ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇಡೀ ದಿನ 3ನೇ ವಾರ್ಡಿನ ವಿವಿಧ ಪ್ರದೇಶಗಳಿಗೆ ಸಂಚರಿಸಿದ ಅವರು ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದರು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಲಾಂ ಬಳ್ಳಾರಿ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ ವಾರ್ಡಿನ ಸದಸ್ಯ ಪ್ರಭಂಜನಕುಮಾರ್ ಮಾತನಾಡಿ; ಶಾಸಕ ನಾರಾ ಭರತ್ ರೆಡ್ಡಿಯವರ ಈ ಅಭಿಯಾನದಿಂದ ನಮಗೆಲ್ಲ ಹುಮ್ಮಸ್ಸು ಬಂದಿದೆ, ಇದೊಂದು ವಿನೂತನ ಪ್ರಯತ್ನ, ಮತ ಪಡೆದು ಗೆದ್ದು ಹೋದ ನಂತರ ಕ್ಷೇತ್ರವನ್ನು ತಿರುಗಿ ನೋಡದ ಜನಪ್ರತಿನಿಧಿಗಳು ಬಹಳ, ಆದರೆ ಭರತ್ ರೆಡ್ಡಿಯವರು ಜನಪರ ಎಂಬುದು ಸಾಬೀತಾಗಿದೆ ಎಂದರು.
ಮಾಜಿ ಮೇಯರ್, ಸದಸ್ಯೆ ಎಂ.ರಾಜೇಶ್ವರಿ, ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಬಿಆರೆಲ್ ಸೀನಾ, ಹಗರಿ ಗೋವಿಂದ, ಸ್ಥಳೀಯ ಮುಖಂಡರಾದ ಮಂಜುನಾಥ ಪಾಟೀಲ್, ರಘುನಾಥ್ ಪಾಟೀಲ್, ಮಹಾದೇವ, ಕುಮಾರನ್, ಬಸವ, ಕಿರಣ್, ಸೂರಿ, ರಾಕೇಶ್, ವಿಶ್ವ, ಪರ್ವೀನ್ ಬಾನು ಸೇರಿದಂತೆ ಹಲವರು ಹಾಜರಿದ್ದರು.
One attachment • Scanned by Gmail