ನೂತನ ಮೇಯರ್ ಆಗಿ ಮುಲ್ಲಂಗಿ ನಂದೀಶ್ ಇಂದು ಅಧಿಕಾರ ಸ್ವೀಕಾರ

Ravi Talawar
WhatsApp Group Join Now
Telegram Group Join Now
ಬಳ್ಳಾರಿ.ಜೂನ್.೨೪: ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ಗಾಗಿ ಜೂನ್ ೨೧ರಂದು ಚುನಾವಣೆ ನಡೆದು ನಗರದ ೧೮ನೇ ವಾರ್ಡಿನ ಪಾಲಿಕೆ ಸದಸ್ಯ ಮುಲ್ಲಂಗಿ ನಂದೀಶ್ ಪಾಲಿಕೆಯ ೨೩ನೇ  ನೂತನ ಮೇಯರ್ ಆಗಿ ಆಯ್ಕೆಯಾಗಿದ್ದರು, ಅದೇ ರೀತಿ ಕೌಲ್ ಬಜಾರ್ ಪ್ರದೇಶದ ೨೮ನೇ ವಾರ್ಡಿನ ಸದಸ್ಯೆ ಡಿ ಸುಖಂ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು.
ಮೇಯರ್ ಮತ್ತು ಉಪ ಮೇಯರ್ ಇಂದು ಪಾಲಿಕೆಯ ತಮ್ಮ ತಮ್ಮ ಕಛೇರಿಯಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸುವ ಮೂಲಕ ಅಧಿಕಾರವನ್ನು ಸ್ವೀಕರಿಸಿದರು. ಮೇಯರ್‌ಗಿರಿಗಾಗಿ ತೀವ್ರ ಪೈಪೋಟಿ ನಡೆದು ಪಕ್ಷದ ಮುಖಂಡರ ಮಧ್ಯಸ್ಥಿಕೆಯಿಂದ ಕೊನೆಗೆ ಮೇಯರ್ ಪಟ್ಟ ಮುಲ್ಲಂಗಿ ನಂಧೀಶ್‌ಗೆ ಒಲಿದಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ನಂದೀಶ್, ನನ್ನ ಅಧಿಕಾರವದಿಯ ಮೊದಲ ಅಧ್ಯತೆ ಎಂದರೆ ಸಮರ್ಪಕವಾದ ಕುಡಿಯುವ ನೀರಿಸ ಸರಬರಾಜು ಮತ್ತು ಒಳಚರಂಡಿಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ನಗರದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸ್ವಚ್ಚತೆಯನ್ನು ಕಾಪಾಡಿ ಮರಗಿಡಗಳನ್ನು ನೆಡುವುದರ ಮೂಲಕ ನಗರವನ್ನು ಹಸೀರೀಕರಣ ಮಾಡಿ ಸೌಂದರ್ಯೀಕರಣ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹಿರಿಯ ಮಾರ್ಗದರ್ಶನದಲ್ಲಿ ನಾನು ಪಣ ತೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿ.ಸಿ.ಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು ಮತ್ತು ನಂದೀಶ್‌ರವರ ಕುಟುಂಬ ಸದಸ್ಯರು ಸೇರಿದಂತೆ ಸ್ನೇಹಿತರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನೂತನ ಮೇಯರ್ ಮುಲ್ಲಂಗಿ ನಂದೀಶ್ ರವರಿಗೆ ಹೂಗುಚ್ಚವನ್ನು ನೀಡುವ ಮೂಲಕ ಅಭಿನಂದಿಸಿದರು
WhatsApp Group Join Now
Telegram Group Join Now
Share This Article