ಬೆಳಗಾವಿ: ಮುತ್ನಾಳ ಹತ್ತಿರ ಫಾರ್ಚೂನರ್ ವಾಹನ ಅಪಘಾತ ಸಂಭವಿಸಿದ್ದು, ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಆ ಮಾರ್ಗವಾಗಿ ತೆರಳುತ್ತಿದ್ದ ಯುವ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಅಪಘಾತವಾಗಿರುವುದನ್ನು ಗಮನಿಸಿ, ತಮ್ಮ ವಾಹನ ನಿಲ್ಲಿಸಿದರು. ತಕ್ಷಣ ಅಂಬುಲನ್ಸ್ ಕರೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು. ಗೌಸ್ ಜಾಲಿಕೊಪ್, ಸುರೇಶ ಇಟಗಿ, ನಿಂಗಪ್ಪ ತಳವಾರ ಮತ್ತಿತರರಿದ್ದರು.