ವಿಜಯಪುರ : ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ಶ್ರೀ ಬಲಭೀಮ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಇಂಡಿ ಹಾಗೂ ಚಡಚಣ ತಾಲೂಕಿನ ಹಲಸಂಗಿಯ ಅರವಿಂದ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಖೋಖೋ ಸ್ಪರ್ಧೆಯಲ್ಲಿ ಬಾಲಕೀಯರು ಪಾಲ್ಗೊಂಡು ತಾಲೂಕಾ ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಿ.ವೈ. ಸಿಂಗೆ, ಪ್ರಾಚಾರ್ಯರಾದ ಎ.ಎನ್. ದಂದರಗಿ, ಉಪನ್ಯಾಸಕರಾದ ಎಸ್.ಎಸ್. ಬೇಡರ, ಎಸ್.ಎಚ್. ಮುಲ್ಲಾ, ದೈಹಿಕ ಉಪನ್ಯಾಸಕರಾದ ಎಚ್. ಡಬ್ಲ್ಯೂ, ನಾಯಿಕ, ಪ್ರಶಾಂತ ಬಿರಾದಾರ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿ ವರ್ಗದವರು ಹರ್ಷ ವ್ಯಕ್ತಪಡಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ಶ್ರೀ ಬಲಭೀಮ ಪದವಿ ಪೂರ್ವ ವಿದ್ಯಾರ್ಥಿಗಳು ಖೋಖೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
