ಯುಥ್ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿಗೆ ಜಯ ಸಿಗಲಿದೆ: ಸಂಸದೆ ಪ್ರಿಯಂಕಾ

Ravi Talawar
ಯುಥ್ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿಗೆ ಜಯ ಸಿಗಲಿದೆ: ಸಂಸದೆ ಪ್ರಿಯಂಕಾ
WhatsApp Group Join Now
Telegram Group Join Now
ಬೆಳಗಾವಿ:  ಯುಥ್ ಕಾಂಗ್ರೆಸ್ ‌ಪದಾಧಿಕಾರಿಗಳ‌ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿಗೆ ಯುವಕರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತ‌‌ನಾಡಿದ ಅವರು, ಯುಥ್ ಕಾಂಗ್ರೆಸ್ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಎಲ್ಲ ಶಾಸಕರನ್ನು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. ಚುನಾವಣೆ ಪ್ರಕ್ರಿಯೆಯೂ ಆನಲೈನ್ ಮೂಲಕ ಇರುವುದರಿಂದ ಈಗಾಗಲೇ ಯುವಕರಿಗೆ ಫೋನ್ ಮೂಲಕ ಮನವಿ ಮಾಡಿದ್ದೇವೆ. ಸಹೋದರನಿಗೆ ಶುಭವಾಗಲಿ ಎಂದು ಹಾರೈಸಿದರು.
ಇನ್ನು ಚಿಕ್ಕೋಡಿ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಡಿಡಿಪಿಐಗಳೊಂದಿಗೆ ಸಭೆ ನಡೆಸಲಾಗಿದೆ. ಇನ್ನೊಂದು‌ ಸಲ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕಡೆಯಲಾಗುವದು ಎಂದ ಅವರು, ರಾಷ್ಟ ರಾಜಕಾರಣಕ್ಕೆ ನಾನು ಕಾಲಿಟ್ಟಿದ್ದು, ಇನ್ನು ಮುಂದಿನ ದಿನಗಳಲ್ಲಿ ನನ್ನ ಸಹೋದರ ರಾಜ್ಯ ರಾಜಕಾರಕ್ಕೆ ಕಾಲಿಡಲಿದ್ದಾರೆ.  ಮುಖ್ಯವಾಗಿ ಸಹೋದರ ರಾಹುಲ್‌ ಜಾರಕಿಹೊಳಿ ಅವರಿಗೆ ರಾಜಕೀಯದಲ್ಲಿ ಏನಾದರೂ ಬಡವರಿಗೆ ಕೆಲಸ ಮಾಡಬೇಕೆಂಬ ಛಲ ಹೊಂದಿದ್ದಾರೆ. ಅದರಲ್ಲೂ ರಾಹುಲ್‌ ಜಾರಕಿಹೊಳಿ ಅವರು ರಾಜ್ಯ ರಾಜಕಾರಣಕ್ಕೆ ಬರುವದರಿಂದ ನಮ್ಮ ತಂದೆಯವರಾದ ಸತೀಶ್‌ ಜಾರಕಿಹೊಳಿ ಅವರಿಗೆ ಸಹಾಯವಾಗಲಿದೆ ಎಂದು ಹೇಳಿದರು.
WhatsApp Group Join Now
Telegram Group Join Now
Share This Article