ಮಕ್ಕಳಾಗದ ಸೊಸೆಯನ್ನು ಕೊಲೆ ಮಾಡಿದ ಅತ್ತೆ ಮಾವ

Ravi Talawar
ಮಕ್ಕಳಾಗದ ಸೊಸೆಯನ್ನು ಕೊಲೆ ಮಾಡಿದ ಅತ್ತೆ ಮಾವ
WhatsApp Group Join Now
Telegram Group Join Now
ಅಥಣಿ: ಮದುವೆಯಾಗಿ ಮಕ್ಕಳಾಗಿಲ್ಲವೆಂದು ಸೊಸೆಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಬೈಕ್‌ಗೆ ಸೀರೆ ಸಿಲುಕಿದ ನೆಪದಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲುಕಿನ ಬಳ್ಳಿಗೇರಿ ಮಲಾಬಾದ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ರೇಣುಕಾ ಸಂಜಯ ಹೊನಕಾಂಡೆ (32) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧಪಟ್ಟಂತೆ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳಾದ ಬೆಳಗಾವಿ ಹೆಚ್ಚುವರಿ ಪೋಲಿಸ್ ಅಧಿಕ್ಷಕರು ಶೃತಿ,  ಅಥಣಿ ಡಿವೈಎಸ್ಪಿ ಪ್ರಶಾಂತ ಮುನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೈದ ಅತ್ತೆ ಜಯಶ್ರೀ ಹೊನಕಾಂಡೆ ಮತ್ತು ಮಾವ ಕಾಮಣ್ಣ ಹೊನಕಾಂಡೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WhatsApp Group Join Now
Telegram Group Join Now
Share This Article