ಬಳ್ಳಾರಿ, ಜೂ.14: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಶುಕ್ರವಾರ ನಗರದ ಹಾವಂಭಾವಿ ಪ್ರದೇಶದ ಹಲವು ಕಡೆಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಭಾಗವಾಗಿ ಶುಕ್ರವಾರ ಸಂಜೆ ವಾರ್ಡ್ ಸಂಖ್ಯೆ 34ರ ವಿದ್ಯಾನಗರದ ರಾಘಾ ಫೋರ್ಟ್ ಅಪಾರ್ಟ್ಮೆಂಟಿನ ಹಿಂಭಾಗ, 6ನೇ ಅಡ್ಡ ರಸ್ತೆಯ ಲಿಂಕ್ ರಸ್ತೆಗಳ ಅಭಿವೃದ್ಧಿಗಾಗಿ ಕೆಕೆಆರ್’ಡಿಬಿ ಅನುದಾನದ ಅಡಿ ಅಂದಾಜು 1 ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯರು- ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯ ಮಿಂಚು ಸೀನಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ವಿಷ್ಣು ಬೋಯಾಪಾಟಿ, ಸ್ಥಳೀಯ ಮುಖಂಡರಾದ ಯೋಗಾನಂದ ರೆಡ್ಡಿ, ನಾಣಿ, ಅನೂಪ್, ಮಂಜು, ಹರ್ಷ, ಕಾಂಗ್ರೆಸ್ ಮುಖಂಡರಾದ ಬಿಆರೆಲ್ ಸೀನಾ, ಶಿವರಾಜ್, ಎಂ.ಸುಬ್ಬರಾಯುಡು ಸೇರಿದಂತೆ ಹಲವು ಜನ ಹಾಜರಿದ್ದರು