ನೇಸರಗಿ. ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮದ ನಿವಾಸಿ ( ಹೊಸೂರ ಗ್ರಾಮದ ) ಬಸವರಾಜ ಮಡಿವಾಳಪ್ಪ ಪಾಟೀಲ ಇವರು ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 739 ರ್ಯಂಕ್ ಪಡೆದು ತೇರ್ಗಡೆಯಾದ ಇವರನ್ನು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಇವರು ವಿಡಿಯೋ ಕಾಲ್ ಮಾಡಿ ಅಭಿನಂದಿಸಿದರು. ಕುಮಾರಿ ಆಲದಕಟ್ಟಿ ನಂತರ ನೀವು ಬೈಲಹೊಂಗಲ ತಾಲೂಕಾ ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಉನ್ನತ ಮಟ್ಟದಲ್ಲಿ ಪಾಸಾಗಿ ನಮ್ಮ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದು. ಪ್ರಸಕ್ತ ಯುವ ಜನತೆಗೆ ನೀವು ಮಾದರಿ ಆಗಿದ್ದೀರಾ, ಮುಂದೆ ಉನ್ನತ ಸ್ಥಾನ ಪಡೆದು ಮುಂದೆ ಬರುತ್ತೀರಿ, ಬೆಸ್ಟ್ ಆಫ್ ಲಕ್ ಎಂದು ಹೇಳಿ ಶುಭ ಕೋರಿದರು.


