ಕಾಂಗ್ರೆಸ್ಸಿನ ಐದು ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮನೆಗೆ ಹೋಗಿ ಹೇಳಿ .ಸಚಿವ ಸತೀಶ ಜಾರಕಿಹೊಳಿ 

Ravi Talawar
ಕಾಂಗ್ರೆಸ್ಸಿನ ಐದು ಯೋಜನೆಗಳನ್ನು ಪ್ರತಿಯೊಬ್ಬರಿಗೂ ಮನೆಗೆ ಹೋಗಿ ಹೇಳಿ .ಸಚಿವ ಸತೀಶ ಜಾರಕಿಹೊಳಿ 
WhatsApp Group Join Now
Telegram Group Join Now
ರಾಯಬಾಗ,ಏಪ್ರಿಲ್​ 08:  ತಾಲೂಕಿನ ಅಳಗವಾಡಿ  ಗ್ರಾಮದ ಪ್ರತಿಯೊಬ್ಬರ ಮನೆ ಮನೆಗೆ ಹೋಗಿ ಕಾಂಗ್ರೆಸ್ಸ ಸರ್ಕಾರದ ಐದು ಯೋಜನೆಗಳನ್ನು ಹೇಳಿ ಈ ಬಾರಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ನೀಡುವಂತೆ ಕಾರ್ಯಕರ್ತರಿಗೆ ಹೇಳಿದರು ಸುಭಾಷ ಹಂಜೆ ಅವರ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಕುಡಚಿ ಕ್ಷೇತ್ರ ಶಾಸಕ ಶ್ರೀ ಮಹೇಂದ್ರ ತಮ್ಮನ್ನವರ ಮಾತನ್ನಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಈಗಾಗಲೇ ಪಂಚಯೋಜನೆಗಳನ್ನು ಜಾರಿಗೆ ತಂದಿದೆ ಅದಕ್ಕಾಗಿ ತಾವುಗಳು ಸಹೋದರಿ ಪ್ರಿಯಾಂಕಾ ಜಾರಕಿಹೊಳಿ ಅವರು ಹಸ್ತ ಚಿಹ್ನೆ ಗೆ ಮತ ನೀಡಿ ಎಂದರು.
ಕಾಯ೯ಕತ೯ರೊಬ್ಬರು ಸಾಹುಕಾರ ೪,ನೇಯ ತಾರೀಖು ನೀರು ನಮ್ಮ ಭಾಗಕ್ಕೆ ಬರಬೇಕಾಗಿತ್ತು ಯಾಕೆ ಬರಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ವಾಡಿಕೆಯಂತೆ ಈಗಬಾಗಲಕೋಟೆ ಭಾಗಕ್ಕೆ ಬಿಡಲಾಗಿದೆ ಇವಾಗ ೧೦ನೇಯ ತಾರೀಕಿನಿಂದ ಈ ಭಾಗಕ್ಕೆ ಬಿಡಲಾಗುತ್ತದೆ ಅಲ್ಲದೆ ಮೇ ತಿಂಗಳಲ್ಲಿ ಮತ್ತೊಮ್ಮೆ ಹರಿಸಲಾಗುವುದು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಶ್ಯಾಮ ರಾವ್ ಘಾಟಗೆ ,ಮಾಜಿ ಜಿ ಪಂ ಸದಸ್ಯ ಮಹಾದೇವ ಶಿರಗೂರೆ ,ಗಣ್ಯರಾದ ಸಂಜು ಭಾನೆ , ಪ್ರವೀಣ್ ತೇಲಿ , ಯಲ್ಲಪ್ಪ ಶಿಂಗೆ ,ವಧ೯ಮಾನ,ಶಿರಹಟ್ಟಿ ಶ್ರೀಮತಿ ಜಾಸ್ಮಿನ್ ಅಲಾಸೆ ಚಿಕ್ಕೋಡಿಯ ಮಹೀಳಾ ಘಟಕದ ಅಧ್ಯಕ್ಷೆಯವರುಮತ್ತು ಅಳಗವಾಡಿಯ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
WhatsApp Group Join Now
Telegram Group Join Now
Share This Article