ರನ್ನ ಬೆಳಗಲಿ:ಸೆ. ೦೬., ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ಶುಕ್ರವಾರ ದಂದು ಡಿಸಿಸಿ ಬ್ಯಾಂಕ್ನ ನೂತನ ಶಾಖೆಯನ್ನು ಕರ್ನಾಟಕ ಸರ್ಕಾರದ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿ, ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಎಲ್ಲಾ ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಹಕರಿಗೆ ಸಕಲ ಸೌಲಭ್ಯಗಳನ್ನು ನೀಡುವ ಗುರಿಯನ್ನು ಬ್ಯಾಂಕು ಹೊಂದಬೇಕು ಎಂದು ತಿಳಿಸಿದರು.
ಬಿಡಿಸಿಸಿನ ಬ್ಯಾಂಕಿನ ನಿರ್ದೇಶಕರಾದ ಆರ್ ಎಸ್ ತಳೆವಾಡ ರನ್ನ ಬೆಳಗಲಿಯ ರೈತ ಬಾಂಧವರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ತಮ್ಮೆಲ್ಲರಿಗೆ ಉತ್ತಮ ಸೌಲಭ್ಯ ನೀಡುತ್ತದೆ ಎಂದು ಭರವಸೆ ಇಟ್ಟಿದ್ದೇನೆ. ಇದು ಎಲ್ಲಾ ರೈತ ಬಾಂಧವರ ಬ್ಯಾಂಕು ಅದರ ಅಭಿವೃದ್ಧಿ ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ರೂಪಾ ಹೊಸಟ್ಟಿ, ಪಿ ಕೆ ಪಿ ಎಸ್ ಅಧ್ಯಕ್ಷರುಗಳಾದ ಚಿನ್ನಪ್ಪ ಪೂಜೇರಿ,ಪ್ರವೀಣ ಪಾಟೀಲ
ಡಿಸಿಸಿ ಬ್ಯಾಂಕ್ ಎಮ್ ಡಿ ಎಸ್ ಎನ್ ನೀಲಪ್ಪನವರ,ಜಿ ಎಮ್ ರುದ್ರಪ್ಪ ಕೋಮಾರ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದ್ದುಗೌಡ ಪಾಟೀಲ್, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕಿವಡಿ, ಮುಧೋಳ ತಾಲೂಕಾ ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕರಾದ ಬಸವರಾಜ ಹಿಕಡಿ,ಆದರ್ಶ ಕುಲಕರ್ಣಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು, ಪಿಕೆಪಿಎಸ್ ಸದಸ್ಯರು, ಮುಖಂಡರು, ರೈತ ಬಾಂಧವರು ಉಪಸ್ಥಿತರಿದ್ದರು. ನಿಂಗರಾಜ್ ಗುಡಿ ಮತ್ತು ರಾಚಣ್ಣ ತೇಲಿ ಕಾರ್ಯಕ್ರಮ ನಿರ್ವಹಿಸಿದರು.
ಕೋಟ ೦೧
ಪಟ್ಟಣವು ಸಾಕ? ನೀರಾವರಿ ಜಮೀನು ಹೊಂದಿದ್ದು, ಉತ್ತಮ ಬೇಸಾಯಕ್ಕೆ ವರದಾನವಾಗಿದೆ. ರೈತರ ಕಗಳಿಗೆ ನಮ್ಮ ಬ್ಯಾಂಕು ಸದಾ ಸ್ಪಂದಿಸುತ್ತದೆ ಮತ್ತು ರಾಜ್ಯ ಕೇಂದ್ರ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ತಮಗೆ ನೀಡುತ್ತದೆ.
ಅಜಯಕುಮಾರ ಸರನಾಯಕ,
ಡಿಸಿಸಿ ಬ್ಯಾಂಕ್ ಅಧ್ಯಕ್ಷರು.