ಸಾರ್ವಜನಿಕರ ಅಹವಾಲು ಅಳಿಸಿದ ಸಚಿವೆ ಹೆಬ್ಬಾಳಕರ

Ravi Talawar
ಸಾರ್ವಜನಿಕರ ಅಹವಾಲು ಅಳಿಸಿದ ಸಚಿವೆ ಹೆಬ್ಬಾಳಕರ
WhatsApp Group Join Now
Telegram Group Join Now

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಕ್ಷೇತ್ರದ ಮಹಿಳೆಯರು, ಪುರುಷರು,  ವೃದ್ಧರು, ಯುವಕರು ಬಂದಿದ್ದರು. ಸರ್ಕಾರಿ ಯೋಜನೆ, ಫೈನಾನ್ಸ್‌ ಕಿರುಕುಳ, ಹೊಲಮನೆ ವ್ಯಾಜ್ಯ, ಪಿಂಚಣಿ, ಉದ್ಯೋಗ, ಹೀಗೆ ಹತ್ತು ಹಲವು ಕಾರಣಗಳನ್ನು, ಸಮಸ್ಯೆಗಳನ್ನು ಇಟ್ಟುಕೊಂಡು ಬಂದಿದ್ದ ಜನರಿಗೆ ಸಚಿವೆ ಹೆಬ್ಬಾಳ್ಕರ್‌ ಪರಿಹಾರದ ಭರವಸೆ ನೀಡಿದರು.

ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಭಾಗ್ಯಲಕ್ಷ್ಮೀ ಯೋಜನೆ ಹಣ, ವೃದ್ಧರಿಗೆ ಪಿಂಚಣಿ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶೀಘ್ರವೇ ಎಲ್ಲ ಅಧಿಕಾರಿಗಳಿಗೆ ಹೇಳಿ ನಿಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಸಚಿವೆ ಹೆಬ್ಬಾಳ್ಕರ್‌ ಭರವಸೆ ನೀಡಿದರು.

WhatsApp Group Join Now
Telegram Group Join Now
Share This Article