ಬಳ್ಳಾರಿ, ಏ.06..ಸಿರುಗುಪ್ಪ ಸಿಂಧನೂರ್ ಲಿಂಗಸೂಗೂರು ನೂತನ ರೈಲ್ವೆ ಮಾರ್ಗದ ರಚನೆಗಾಗಿ ಬಜೆಟ್ ಅಧಿವೇಶನದ ಕೊನೆಯ ದಿನ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಈ ಮಾರ್ಗದ ಸರ್ವೆಯ ಕಾರ್ಯ ಆರಂಭಕ್ಕಾಗಿ ಪರಿಶೀಲಿಸಿ ಶಿಫಾರಸು ಮಾಡಲು ಆದೇಶ ನೀಡಿ ಇದಕ್ಕಾಗಿ 22 ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದಾರೆ
ಎಂಬ ವಿಷಯವನ್ನು ಕೊಪ್ಪಳ ಕ್ಷೇತ್ರದ ಮಾಜಿ ಸಂಸದರಾದ ಸಿಂಧನೂರಿನ ವಿರೂಪಾಕ್ಷಪ್ಪ ಹಾಗೂ ಸಿಂಧನೂರಿನ ಶಾಸಕರಾದ ಬಾದರ್ಲಿ ಹಂಪನಗೌಡ
ಇವರೊಡನೆ ಇಂದು ಸಿಂಧನೂರಿನಲ್ಲಿ ವಿಚಾರ ವಿನಿಮಯ ನಡೆಸಲಾಯಿತು
ಹಾಗೂ ಬಳ್ಳಾರಿ ಸಿಂಧನೂರ್ ರೈಲ್ವೆ ಮಾರ್ಗದ ಕಾಮಗಾರಿ ಆರಂಭಿಸಲು ಏಪ್ರಿಲ್ ನಲ್ಲಿ ನಡೆಯುವ ಅಧಿವೇಶನದಲ್ಲಿ ಪುನಃ ನಿಯೋಗ ಕೊಂಡಯ್ಯಬೇಕೆಂದು ಹಂಪನ ಗೌಡರು ಸಭೆಯಲ್ಲಿ ಸೂಚಿಸಿದರು
ಸಿಂಧನೂರರಿನ ಮುಖಂಡರಾದ ರಾಜಶೇಖರ್ ಪಾಟೀಲ್
ಕಲ್ಮಠ ವಕೀಲರು ಸಮಿತಿಯ ಅಧ್ಯಕ್ಷ ಕೆಎಂ ಮಹೇಶ್ವರ್ ಸ್ವಾಮಿ ಪಿ ಬಂಡೆಗೌಡ ಎಚ್ ಕೆ ಗೌರಿಶಂಕರ್ ಜಾಲಿಹಾಳ ಶ್ರೀಧರ್
ಇವರು ಉಪಸ್ಥಿತರಿದ್ದರು


