ಎಚ್ ಆಂಜನೇಯಗೆ ವಿಧಾನಪರಿಷತ್ ಸ್ಥಾನ ನೀಡಿ: ಮಂಜುನಾಥ ಶಿಡ್ಲವ್ವಗೋಳ ಒತ್ತಾಯ

Ravi Talawar
ಎಚ್ ಆಂಜನೇಯಗೆ ವಿಧಾನಪರಿಷತ್ ಸ್ಥಾನ ನೀಡಿ: ಮಂಜುನಾಥ ಶಿಡ್ಲವ್ವಗೋಳ ಒತ್ತಾಯ
WhatsApp Group Join Now
Telegram Group Join Now

ನೇಗಿನಹಾಳ,30: ಮಾದಿಗ ಸಮುದಾಯದ ಹಿರಿಯ ಮುಖಂಡರು, ಮಾಜಿ ಸಚಿವರಾದ ಎಚ್.ಆಂಜನೇಯ ಅವರು ಸಮಾಜದ ಏಳಿಗ್ಗೆ ಹಗಲಿರುಳು ಶ್ರಮಿಸಿದ್ದಾರೆ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲು ಕಾಂಗ್ರೆಸ್ ಪಕ್ಷ ಮುಂದಾಗಬೇಕೆಂದು ಎಂದು ಕಾಂಗ್ರೆಸ್ ಪಕ್ಷದ ನೇಸರಗಿ ಬ್ಲಾಕ್ ಎಸ್.ಸಿ ಅಧ್ಯಕ್ಷ, ದಲಿತ ಮುಖಂಡಮಂಜುನಾಥ ಶಿಡ್ಲೆವಗೋಳ ಆಗ್ರಹಿಸಿದರು.

ಸಮೀಪದ ಸಂಪಗಾವಿ ಗ್ರಾಮದಲ್ಲಿ ಮಾತನಾಡಿ ವಿಧಾನ ಪರಿಷತ್ತಿನ ೧೧ ಸ್ಥಾನಗಳು ಖಾಲಿಯಾಗುವದರಿಂದ ಒಂದು ಸ್ಥಾನವನ್ನು ಎಚ್.ಆಂಜನೇಯ ವರಿಗೆ ನಾಮನಿರ್ದೇಶನ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಾಗಿ ಅನೇಕ ವರ್ಷಗಳಿಂದ ಶೋಷಿತ ಸಮುದಾಯಗಳ ಜನರ ಕಲ್ಯಾಣಕ್ಕಾಗಿ ತೊಡಗಿಸಿಕೊಂಡಿದ್ದಾರೆ.

ಅವರಿಗೆ ವಿಧಾನ ಪರಿಷತ್ ಸ್ಥಾನನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಸೇರಿದಂತೆ ಪಕ್ಷ ಮುಖಂಡರಲ್ಲಿ ಮನವಿ ಮಾಡಲಾಗುತ್ತದೆ ಎಂದರು.

(೨೯ ಎನ್.ಜಿ.ಪಿ ೦೧) ಮಂಜುನಾಥ ಶಿಡ್ಡವ್ವಗೋಳ,ಕಾಂಗ್ರೇಸ್ ಪಕ್ಷದ ಎಸ್.ಸಿ ಬ್ಲಾಕ್ ಅಧ್ಯಕ್ಷ ನೇಸರಗಿ

WhatsApp Group Join Now
Telegram Group Join Now
Share This Article