ಮಹದಾಯಿ ಕಿಡಿ ಸಿಡಿಸಿದ ಸಾವಂತ್‌ಗೆ ಮುಖಭಂಗ

Ravi Talawar
ಮಹದಾಯಿ ಕಿಡಿ ಸಿಡಿಸಿದ ಸಾವಂತ್‌ಗೆ ಮುಖಭಂಗ
WhatsApp Group Join Now
Telegram Group Join Now

ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಮಹಾದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ‌ತಂಡ ಭೇಟಿ ನೀಡಿದೆ. ಈ ವೇಳೆ ಕಾಮಗಾರಿ ನಡೆಯದೇ ಇರುವುದು ದೃಢವಾಗಿದೆ.

ಮೊದಲಿನಿಂದಲೂ ಮಹಾದಾಯಿ ಯೋಜನೆ ಜಾರಿಗೆ ಗೋವಾ ಪದೇ ಪದೇ ಅಡ್ಡಗಾಲು ಹಾಕುತ್ತಾ ಬಂದಿದೆ. ಮಹದಾಯಿ ನ್ಯಾಯಧೀಕರಣ, ಸುಪ್ರೀಂ ಕೋರ್ಟ್ ತೀರ್ಪು ನೀಡಿದರೂ ಜಾರಿಯಾಗುತ್ತಿಲ್ಲ.

ಕೇಂದ್ರ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಇಲಾಖೆ ಅನುಮತಿಗೂ ಗೋವಾ ಸರ್ಕಾರ ಅಡ್ಡಗಾಲು ಹಾಕುತ್ತಿದ್ದು ಮಹದಾಯಿ ಜಾರಿ ವಿರುದ್ಧ ಗೋವಾ ಕುತಂತ್ರಕ್ಕೆ ಕರ್ನಾಟಕದ ಜನಪ್ರತಿನಿಧಿಗಳು ತಿರುಗೇಟು ನೀಡುವ ಪ್ರಯತ್ನ ಮಾಡಬೇಕಿದೆ. ಐದು ದಶಕಗಳ ಕಾಲ ಹೋರಾಟ ಮಾಡಿದರೂ ಮಲಪ್ರಭಾ ನದಿ ಪಾತ್ರದ ಜನರಿಗೆ ಹನಿ ನೀರು ಸಿಗುತ್ತಿಲ್ಲ.

 

WhatsApp Group Join Now
Telegram Group Join Now
Share This Article