ಏಪ್ರಿಲ್ 1 ರಿಂದ  ಮದನಬಾವಿ ಗ್ರಾಮದೇವಿಯ ಜಾತ್ರೆ ಆರಂಭ

MK HasiruKranti
ಏಪ್ರಿಲ್ 1 ರಿಂದ  ಮದನಬಾವಿ ಗ್ರಾಮದೇವಿಯ ಜಾತ್ರೆ ಆರಂಭ
WhatsApp Group Join Now
Telegram Group Join Now

 

ನೇಸರಗಿ. ಇಲ್ಲಿಗೆ ಸಮೀಪದ ಮದನಬಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಗ್ರಾಮದೇವಿಯ ಜಾತ್ರೆಯು 11 ವರ್ಷಗಳ ನಂತರ  ಬುಧವಾರ ದಿ. 01-04-2026 ರಿಂದ ಗುರುವಾರ ದಿ. 9-4-2026 ರವರೆಗೆ ಅದ್ದೂರಿಯಾಗಿ ನೆರವೇರಲಿದೆ. ಜಾತ್ರೆಯ  ದಿವ್ಯ ಸಾನಿಧ್ಯವನ್ನು ಸುಕ್ಷೇತ್ರ ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಏ. 1 ರಂದು  ಬ್ರಾಹ್ಮೀ ಮಹೂರ್ಥದಲ್ಲಿ ಹಣಬರಹಟ್ಟಿ ಕೆಳದಿ ಹಿರೇಮಠದ ಶ್ರೀ ಷ. ಭ್ರ ಬಸವಲಿಂಗ ಶಿವಾಚಾರ್ಯರು ಹಾಗೂ ಮಲ್ಲಾಪೂರ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳ ಇವರುಗಳ ಸಮ್ಮುಖದಲ್ಲಿ ಹೋಮ, ಹವನ, ಪೂಜೆ, ದೈವದ ಉಡಿ ತುಂಬುವದು ಮತ್ತು ಬಾಬದ ಮನೆ ವಸತಿ, ರಾತ್ರಿ 8 ಘಂಟೆಗೆ ಶಂಕರಣ್ಣ ಸಂಕನ್ನವರ ಹಾಗೂ ಸಂಗಡಿಗರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವದು. ಏ. 2 ರಂದು ಗ್ರಾಮದೇವಿಗೆ ಉಡಿ ತುಂಬುವದು, ಗ್ರಾಮದೇವಿಯ ಹೊನ್ನಾಟ  ಸಂಜೆ 7 ಘಂಟೆಗೆ ಶ್ರೀ ಬಸವೇಶ್ವರ ರಥದ  ಕಳಸಾರೋಹಣ, ರಾತ್ರಿ 8 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಏ. 3 ರಂದು ಗ್ರಾಮದೇವಿಗೆ ಉಡಿ ತುಂಬುವದು, ಹೊನ್ನಾಟ, ರಾತ್ರಿ 8 ಘಂಟೆಗೆ ಗಿರಿಯಾಲ ಹಂಸಧ್ವನಿ ಮೆಲೋಡಿಸ್ ಆರ್ಕೆಸ್ಟ್ರಾ, ಜೀ ಕನ್ನಡ ಸರಿಗಮಪ ಗಾಯಕರಾದ ಪಂಕಜ್ ಪರಸನಟ್ಟಿ ಹಾಗೂ ದಿಯಾ ಹೆಗಡೆ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ, ಏ 4 ರಂದು ಗ್ರಾಮದೇವಿಗೆ ಉಡಿ ತುಂಬುವದು, ಹೊನ್ನಾಟ, ಸಂಜೆ 8 ಘಂಟೆಗೆ ಜೀ ಹಾಗೂ ಕಲರ್ಸ್ ಕನ್ನಡ ವಾಹಿನಿ ಕಲಾವಿದರಿಂದ ನಗೆಹಬ್ಬ ಕಾರ್ಯಕ್ರಮ ಜರುಗುವದು. ಏ 5 ರಂದು ಉಡಿ ತುಂಬುವದು, ಹೊನ್ನಾಟ  ರಾತ್ರಿ 8 ಘಂಟೆಗೆ ಶ್ರೀ ದೇವಿಯ ನವ ಅವತಾರದ ನೃತ್ಯ ಸಂಯೋಜನೆ, ಏ 6 ರಂದು ಉಡಿ ತುಂಬುವದು, ಹೊನ್ನಾಟ  ಸಂಜೆ 8 ಘಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಘಂಟೆಗೆ  ಶ್ರೀ ಚನ್ನವೃಷಬೇಂದ್ರ ನಾಟ್ಯ ಸಂಘ ಮದನಬಾವಿ ಇವರಿಂದ ಸಮಾಜ ರೂಪಿಸಿದ ರೌಡಿ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನೆರವೇರಲಿದೆ.ಏ 7 ರಂದು ಹೊನ್ನಾಟ, ಸೀಮೆಕಟ್ಟೆಗೆ ಕುರಿಸುವದು, ಸಂಜೆ 5 ಘಂಟೆಗೆ ಶ್ರೀ ಬಸವೇಶ್ವರ ಮಹಾರಥೋತ್ಸವ ಜರುಗುವದು, ರಾತ್ರಿ 9 ಘಂಟೆಗೆ ಬೀಳಗಿ ತಾಲೂಕಿನ ಬೂದಿಹಾಳ ಎಸ್ ವಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ಇವರಿಂದ ನವಲಗುಂದದ ಅಜಾತ ನಾಗಲಿಂಗೇಶ್ವರ ಮಹಾತ್ಮೆ ಭಕ್ತಿ ಪ್ರಧಾನ ನಾಟಕ, ಏ 8 ರಂದು ಉಡಿ ತುಂಬುವದು, ಸಂಜೆ 6 ಘಂಟೆಗೆ ಮದನಬಾವಿಯ ಮಹಾಂತೇಶ ದೊಡ್ಡಗೌಡರ ಅಭಿಮಾನಿಗಳ ಭಳಗದ ವತಿಯಿಂದ ಗ್ರಾಮೀಣ ಮಟ್ಟದ ಹೊನಲು – ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ, ಏ 9 ರಂದು ಉಡಿ ತುಂಬುವದು, ಸಂಜೆ ಶ್ರೀ ಗ್ರಾಮದೇವಿಯರು ಸೀಮೆಗೆ ಹೋಗುವದು ನಂತರ ಶ್ರೀ ಬಸವೇಶ್ವರ ರಥದ ಕಳಸ ಇಳಿಸುವ ಕಾರ್ಯಕ್ರಮ ಜರುಗಲಿವೆ ಎಂದು ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಜಾತ್ರಾ ಉತ್ಸವ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article