ಬೆಳಗಾವಿ : ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ನಿರಂತರವಾಗಿ ಜೊತೆಯಾಗಿದ್ದು ಕೆಲಸ ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಬಿಕೆ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಎನ್.ಆರ್.ಎಲ್.ಎಮ್ (ಸಂಜೀವಿನಿ ಶೆಡ್) ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇತ್ರದ ಶಾಸಕರೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರವನ್ನು ರಾಜ್ಯದಲ್ಲೇ ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ಯಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದಕ್ಕೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಇದೇ ವೇಗದಲ್ಲಿ ಕ್ಷೇತ್ರವನ್ನು ಮುಂದಕ್ಕೊಯ್ಯಲು ಎಲ್ಲರ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.
ಕ್ಷೇತ್ರದ ಯಾರೇ ಬಂದರೂ ಸಚಿವರು ಸ್ಪಂದಿಸುತ್ತಿದ್ದಾರೆ. ಹೇಳಿದ ಯಾವುದೇ ಕೆಲಸ ಮಾಡಿಕೊಡುತ್ತಿದ್ದಾರೆ. ನೀವೆಲ್ಲ ಅವರನ್ನು ಮನೆಮಗಳು ಎಂದು ಕಾಣುತ್ತಿರುವಂತೆ ಅವರೂ ಮನೆ ಮಗಳಾಗಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದು ಚನ್ನರಾಜ ಹೇಳಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಕೋಲಕಾರ, ಉಪಾಧ್ಯಕ್ಷರಾದ ಬೀಬಿಹನೀಫಾ ಜಮಾದಾರ, ಸದಸ್ಯರಾದ ಅಬೇದಾಬೇಗಂ ಸನದಿ, ಮೈನೂದ್ದಿನ್ ಅಗಸಿಮನಿ, ಭಾಗ್ಯಶ್ರೀ ಹಣಬರ, ವೀಣಾ ಪಾಟೀಲ, ಗುಡುಮಾಬಿ ಮೋಮಿನ್, ಮಲ್ಲಿಕ್ ಮನಿಯಾರ್, ಶಿವಲಿಂಗಯ್ಯ ಹಿರೇಮಠ್, ಇಸ್ಮಾಯಿಲ್ ಮಕಾನದಾರ್, ಪಾರ್ವತಿ ತಳವಾರ, ಅಡಿವೆಪ್ಪ ಅಂಗಡಿ, ಗ್ರಾಮದ ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


