ಅಥಣಿ : ಜಾಗತಿಕ ತಾಪಮಾನ ತಡೆಯದಿದ್ದರೆ ಮುಂದೆ ಈ ಜಗತ್ತಿಗೆ ಉಳಿಗಾಲವಿಲ್ಲ ಕಾರಣ ಪ್ರತಿಯೊಬ್ಬರೂ ಅರಣ್ಯ ಬೆಳೆಸುವದೊಂದೇ ಪರ್ಯಾಯ ವಾಗಿದೆ. ಕಾರಣ ತಾಲೂಕಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದೊಂದು ಗಿಡ ದತ್ತು ನೀಡಿ ಅಥಣಿ ಮಕ್ಕಳ ಉದ್ಯಾನವನ ಅತ್ಯಂತ ಸುಂದರವನವನ್ನಾಗಿ ರೂಪಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಅರಣ್ಯ ಇಲಾಖೆಯ ಮಕ್ಕಳ ಉದ್ಯಾನವನದಲ್ಲಿ ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಬೆಳಗಾವಿ ವೃತ್ತ, ಬೆಳಗಾವಿ ಘಟಪ್ರಭಾ ವಿಭಾಗ ಗೋಕಾಕ ಪ್ರಾದೇಶಿಕ ಅರಣ್ಯ ವಲಯ ಅಥಣಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ನಿರ್ಮಿಸಲಾದ ಯೋಗಾಸನ ಕಟ್ಟೆ ಉದ್ಘಾಟನೆ ಸಮಾರಂಭ ಹಾಗೂ ವಿಶ್ವ ಪರಿಸರ ದಿನಾಚರಣೆ ಜರುಗಿತು.ನಮ್ಮ ಬದುಕಿಗೆ ಯೋಗ ಮತ್ತು ಪರಿಸರ ಎರಡು ಬಹುಮುಖ್ಯ ಅಂಗಗಳಾಗಿವೆ.ಕೇವಲ ಪರಿಸರ ದಿನಕ್ಕೆ ಮಾತ್ರ ಆಚರಣೆ ಸೀಮಿತವಾಗದೆ ಸಂಪೂರ್ಣ ಮಕ್ಕಳ ಉದ್ಯಾನವನದ ಅಭಿವೃದ್ಧಿ ಮಾಡಿ ಸುಂದರವನವನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.ಕಾರಣ ಪ್ರತಿಯೊಬ್ಬರೂ ಪರಿಸರ ಬೆಳೆಸುವಂತೆ ಸಲಹೆ ನೀಡಿದರು. ಈ ವೇಳೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು 5 ಲಕ್ಷ ರೂ ಅನುದಾನ ನೀಡಿದ್ದು ಹಾಗೂ ಇದೆ ಸ್ಥಳದಲ್ಲಿ ಬರುವ ದಿನಗಳಲ್ಲಿ ಸುಂದರ ಗಾಜಿನ ಮನೆ ನಿರ್ಮಿಸಿ ಯೋಗ ಹಾಗೂ ವಾಯು ವಿಹಾರ ಮಾಡುವವರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.ಈ ವೇಳೆ ಶಿವಯೋಗಿ ಯೋಗ ಬಳಗದ ಸದಸ್ಯರಿಂದ ಶಾಸಕ ಲಕ್ಷ್ಮಣ ಸವದಿಯವರಿಗೆ ಸತ್ಕರಿಸಿದರು.
ಈ ವೇಳೆ ತಹಶಿಲ್ದಾರ ಸಿದ್ದರಾಯ ಬೋಸಗಿ , ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ,ತಾಲೂಕಾ ಪಂಚಾಯತ ಕಾನಿ ಅಧಿಕಾರಿ ಶಿವಾನಂದ ಕಲ್ಲಾಪುರ , ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ರಾಕೇಶ ಅರ್ಜುನವಾಡ , ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ್, ಸಾಮಾಜೀಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಮುಖಂಡರಾದ ರಾಮನಗೌಡಾ ಧರಿಗೌಡ ,ಅಧಿಕಾರಿಗಳಾದ ಎಸ್.ಎಮ್.ಮುಂಜೆ, ಮಂಜುನಾಥ ಪಾಟೀಲ, ಪರಶುರಾಮ ಪಾಟೀಲ,ಪುರಸಭೆ ಸದಸ್ಯರಾದ ರಾಜಶೇಖರ ಗುಡ್ಡೋಡಗಿ,ಬಸವರಾಜ್ ಪಾಟೀಲ್, ರಾಜೇಶ ಪಾಟೀಲ,ಮಾರುತಿ ಸತ್ತಿಗೌಡರ, ಡಿ.ಡಿ.ಮೆಕನಮರಡಿ, ಸಂಗಮೇಶ ಹಚ್ಚಡದ, ಚಿಕ್ಕೋಡಿ ಯೋಗ ಪ್ರಭಾರಿ ಶಿವಾನಂದ ಮಾಲಗಾವಿ, ಯೋಗ ಶಿಕ್ಷಕರಾದ ಶ್ರೀಶೈಲ ಪಾಟೀಲ್,ಅಪ್ಪಾಸಾಹೇಬ ತಾoಬಟ ಸಂಗಮೇಶ ಹಚ್ಚಡದ ನಿರೂಪಿಸಿದರು
ಶಿವಯೋಗಿ ಯೋಗ ಬಳಗದ ಎಸ್ ಎಸ್ ಗೊರಜನಾಳ, ಸಂಜಯ ಕಾಳೆ, ಎಸ್ ಎನ್ ನಾಗನೂರ, ನಾರಾಯಣ ಘೋರ್ಪಡೆ ಸೇರಿದಂತೆ ಶಿವಯೋಗಿ ಯೋಗ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.