ಕೊಳದೂರ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ

Ravi Talawar
ಕೊಳದೂರ ಗ್ರಾಮದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ
WhatsApp Group Join Now
Telegram Group Join Now
ನೇಸರಗಿ. ಸಮೀಪದ ಕೊಳದೂರ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ  *ಚಿಗುರು* ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಸೋಮವಾರದಂದು ಕೊಳದೂರ ಗ್ರಾಮದ  ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದಲ್ಲಿ ನೆರವೇರಿತು.
           ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದ್ಯಸರಾದ ಶ್ರೀಮತಿ ಭಾರತಿ ಮಾವಿನಕಟ್ಟಿ ವಹಿಸಿದ್ದರು.  ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ಬೈಲಹೊಂಗಲ  ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಶೈಲಾ ಜೆ
ಕಾರ್ಯಕ್ರಮದಲ್ಲಿ   ಶ್ರೀ ನಾಗ ದೇವರಿಗೆ ಹಾಲು  ಉನಿಸುವ  ಮೂಲಕ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಶೈಲಾ  ಜೆ ಮಾತನಾಡಿ  ತಾಲೂಕಿನಲ್ಲಿ ನಡೆಯುವ 25  ಜ್ಞಾನವಿಕಾಸ ಕೇಂದ್ರಗಳ ವಿಶೇಷ ಕಾರ್ಯಕ್ರಮಗಳ ಬಗ್ಗೆ ಮತ್ತು ಮಾಹಿತಿ ತಿಂಗಳ ಮಾಹಿತಿ ಕಾರ್ಯಕ್ರಮಗಳು – ಆಟೋ ಸ್ಪರ್ಧೆಗಳ,  ಜಾನಪದ ಗೀತೆ, ಏಕಭಿನಯ ಪಾತ್ರ ಮಾಡುವ ಮೂಲಕ ಈ ದಿನ ಕಾರ್ಯಕ್ರಮ ಅತ್ಯುತ್ತಮವಾಗಿ ನಿರ್ವಹಣೆ   ಕ್ಷೇತ್ರದಿಂದ ನಡೆಯುವಂತಹ ಜ್ಞಾನ ವಿಕಾಸ ಕಾರ್ಯಕ್ರಮದ ಹಿನ್ನೆಲೆ ಮತ್ತು  ಮಹಿಳೆಯರಲ್ಲಿ ಸಾವಲಂಬನೆ ಬದುಕು ಕಟ್ಟಿಕೊಳ್ಳಲು ಉದ್ಯೋಗ ಮೂಲಕ ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿಗೆ ಬೆಳೆಸುವಲ್ಲಿ ತಾಯಂದಿರ ಕರ್ತವ್ಯಗಳ ವಾತ್ಸಲ್ಯ ಮಾಶಾಸನ ಜನಮಂಗಳ ಕಾರ್ಯಕ್ರಮ ಜ್ಞಾನ ವಿಕಾಸ ಕಾರ್ಯಕ್ರಮದ  ಅಡಿಯಲ್ಲಿ ಆಗುವ   ಕಾರ್ಯಕ್ರಮದ ಮಾಹಿತಿ ನೀಡಿದರು.
 ಇಂದು ನಡೆದ ಕಾರ್ಯಕ್ರಮದಲ್ಲಿ  ರಂಗೋಲಿ ಸ್ಪರ್ಧೆಯ ಮಹಿಳೆಯರಿಗೆ ವಿವಿಧ ಆಟೋಟ  ಸ್ಪರ್ಧೆ ಹಾಗೂ ಸಾಂಸ್ಕೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ,ಲಕ್ಷ್ಮಿ ಪೂಜೆಯನ್ನು ಮಾಡಿ ಎಲ್ಲರಿಗೆ ಉಡಿತುಂಬಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು  ಸೇವಾ ಪ್ರತಿನಿಧಿ  ಶ್ರೀಮತಿ ಲಷ್ಮಿ ನೆರವೇರಿಸಿದರು. ಸ್ವಾಗತ, ಸವಿತಾ, ವಂದನೆಯನ್ನು  ವಿದ್ಯಾ ನೆರವೇರಿಸಿದರು ಈ ಸಂದರ್ಭ   ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article