ಜೂನ್ 25ರ ಒಳಗೆ ತುಂಗಭದ್ರ ಜಲಾಶಯದ ಮೂರು ಕಾಲುವೆಗಳಿಗೆ ನೀರು ಬಿಡಿ : ಕರೂರ್ ಮಾಧವ ರೆಡ್ಡಿ ಮನವಿ 

Ravi Talawar
ಜೂನ್ 25ರ ಒಳಗೆ ತುಂಗಭದ್ರ ಜಲಾಶಯದ ಮೂರು ಕಾಲುವೆಗಳಿಗೆ ನೀರು ಬಿಡಿ : ಕರೂರ್ ಮಾಧವ ರೆಡ್ಡಿ ಮನವಿ 
WhatsApp Group Join Now
Telegram Group Join Now
 ಬಳ್ಳಾರಿ ಜೂನ್ 14 : ತುಂಗಾಭದ್ರಾ ಜಲಾಶಯದಲ್ಲಿ ಈ ಹಿಂದೆ ಸಂಗ್ರಹಿಸಿದಂತೆ 100 ಟಿಎಂಸಿ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದು ಜಲಾಶಯ ಸಾಮರ್ಥ್ಯ  ಕುಗ್ಗುತ್ತಾ  ಹೋಗುತ್ತದೆ  ಜಲಾಶಯದಲ್ಲಿ 25 ರಿಂದ 30 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಅಂದರೆ ಜೂನ್ 25ರ ಒಳಗೆ ಜಲಾಶಯದ ಮೂರು ಕಾಲುವೆಗಳಿಗೆ ನೀರನ್ನು ಹರಿಸಿ ರೈತರಿಗೆ ಕೃಷಿ ಚಟುವಟಿಕೆ  ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್  ಕರೂರು ಮಾಧವ ರೆಡ್ಡಿ ತುಂಗಭದ್ರಾ ಮಂಡಳಿಯ ಅಧ್ಯಕ್ಷರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರು.
 ಅವರು ಇಂದು ನಗರದ ಮುಂಡ್ಲೂರು  ರಾಮಪ್ಪ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ತುಂಗಭದ್ರಾ ಜಲಾಶಯದ 33 ಗೇಟ್ ಗಳು ಶೀತಲಗೊಂಡಿದ್ದು ಅದರಲ್ಲಿ ಕಳೆದ ವರ್ಷ 19ನೇ ಗೇಟ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ, ಈ ಗೇಟನ್ನು ಇಲ್ಲಿಯವರೆಗೆ ದುರಸ್ತಿ ಮಾಡಿರುವುದಿಲ್ಲ ಮತ್ತು ಹೊಸ ಗೇಟ್ ಅನ್ನು ಅಳವಡಿಸಿರುವದಿಲ್ಲ, ಜಲಾಶಯಕ್ಕೆ ಅಂದು ಅಳವಡಿಸಿದ ತಾತ್ಕಾಲಿಕ ಗೇಟ್ ಅನ್ನು ಇಂದಿಗೂ ಸಹ ಉಳಿಸಿಕೊಂಡು ಹೋಗಲಾಗುತ್ತಿದೆ.
 ತುಂಗಭದ್ರಾ ಜಲಾಶಯಕ್ಕೆ ಹಾಲಿ ಇರುವ ಗೇಟ್ ಗಳು ಶೀತಲಗೊಂಡಿದ್ದು ಅವುಗಳನ್ನು ಬದಲಾಯಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಮಂಡಳಿಯ ಅಧ್ಯಕ್ಷರಾದ ಶಿವರಾಜ್ ತಂಗಡಿಗಿ ತಿಳಿಸಿರುತ್ತಾರೆ. ಟೆಂಡರ್ ಕರೆದರೂ ಸಹ ಇಂದಿಗೂ ಗೇಟ್ ಅಳವಡಿಸುವ ಕಾರ್ಯ  ಆರಂಭವಾಗಿಲ್ಲ ಇದರಿಂದ ಜಲಾಶಯದ ಮೂರು ಕಾಲುವೆಗಳ ಮತ್ತು ನದಿ ಪಾತ್ರದ ಜನರು ಕೃಷಿ ಚಟುವಟಿಕೆಯನ್ನು ನಡೆಸಲು ಆತಂಕಗೊಂಡಿದ್ದಾರೆ.
 ಕಾರಣ 5 ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಬೋರ್ಡ್ನ ಅಧ್ಯಕ್ಷರು ಸದಸ್ಯರುಗಳು ಸೇರಿ ಮೂರು ಕಾಲುವೆಗಳಿಗೆ ಯಾವಾಗ ನೀರು ಬಿಡಲಾಗುತ್ತದೆ ಎಲ್ಲಿಯವರೆಗೆ ನೀರು ಬಿಡಲಾಗುತ್ತದೆ ಎಂಬುದನ್ನು ಖಚಿತಪಡಿಸಿ ಬೇಕು . ಇದರಿಂದ ಮೂರು ಕಾಲುವೆಗಳ ಐದು ಜಿಲ್ಲೆಗಳ ರೈತರು ನೀರು ಲಭ್ಯವಾಗುವ ಆಧಾರದ ಮೇಲೆ ಬೆಳೆಗಳನ್ನು ಬಿತ್ತಲು ಅನುಕೂಲವಾಗುತ್ತದೆ ಕೂಡಲೇ ತುಂಗಭದ್ರಾ ಜಲಾಶಯದ ಮಂಡಳಿ ಶೀಘ್ರದಲ್ಲೇ ನೀರು ಬಿಡುವ ಮತ್ತು ಬಂದ್ ಮಾಡುವ ದಿನಾಂಕವನ್ನು ರೈತರಿಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಬೇಕೆಂದು ಕೋರಿದರು.
 ಕಳೆದ ವರ್ಷ ಈ ಜಲಾಶಯ ಪಾತ್ರದ ರೈತರು 2 ಲಕ್ಷ ಗುಂಟಾಲ್ ಒಣ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದರು ಈಗ ಇಲ್ಲಿಯವರೆಗೂ ಮೆಣಸಿನಕಾಯಿ ಬೀಜವನ್ನು ಖರೀದಿಸಿರುವುದಿಲ್ಲ ಮತ್ತು ಸಸಿಯನ್ನು ಸಹ ಹಾಕಿರುವುದಿಲ್ಲ ಇದರಿಂದ ರೈತರು ಆತಂಕಗೊಂಡು ಮೆಕ್ಕೆಜೋಳ ಅಥವಾ ಜೋಳವನ್ನು ಬಿತ್ತುವ ಯೋಚನೆಯಲ್ಲಿದ್ದರೆ ದಯವಿಟ್ಟು ಮಂಡಳಿಯ ಅಧಿಕಾರಿಗಳು ಯಾವಾಗ ಕಾಲುವೆಗಳಿಗೆ ನೀರು ಬಿಡುತ್ತದೆ ಎಲ್ಲಿವರೆಗೆ ಬರುತ್ತದೆ ಎಂಬುದನ್ನು ಪತ್ರಿಕಾ ಮಾಧ್ಯಮ ಪ್ರಕಟಿಸಬೇಕೆಂದು ಅವರು ಒತ್ತಾಯಿಸಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ಲೇಪಾಕ್ಷಿ ಪಂಪನಗೌಡ ಬಸವರಾಜ ಸ್ವಾಮಿ ಉಮಾಪತಿ ಗೌಡ ವಿಶ್ವನಾಥ್ ಕೆ ವಿ ತಿಮ್ಮಾರೆಡ್ಡಿ ಓಂಕಾರಪ್ಪ ಪಂಪನಗೌಡ ಸುರೇಂದ್ರ ಸಂಜೀವ ರೆಡ್ಡಿ ಸೇರಿದಂತೆ ಹಲವು  ರೈತರಿದ್ದರು.
WhatsApp Group Join Now
Telegram Group Join Now
Share This Article