ಧಾರವಾಡದ ಕೆಲಗೇರಿ ರಸ್ತೆ ಯಲ್ಲಿರುವ ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ೨೩ ನೇಯ ವಾರ್ಷಿಕೋತ್ಸವದ ಸಮಾರಂಭ ಇದೇ ಮಾರ್ಚ ೧೩ ರಿಂದ ೧೯ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಅನಾದಿಕಾಲದಿಂದಲೂ ರೈತರು ಕರಿಯಮ್ಮ ದೇವಿಗೆ ಶ್ರದ್ದೆ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾ ಬಂದಿದ್ದು, ಈ ದೇವಸ್ಥಾನವು ಭಾವೈಕ್ಯತೆಯ ಕೇಂದ್ರವು ಸಹ ಆಗಿದೆ.

ಮಾರ್ಚ ೧೩ ರಿಂದ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿ ದಿನ ಸಂಜೆ ಭಜನೆ ಹಾಗೂ ಪ್ರಾರ್ಥನೆ ನಡೆಯಲಿದ್ದು, ರಾತ್ರಿ ೮.೩೦ ಕ್ಕೆ ಪ್ರಸಾದ ಮತ್ತು ೯ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಮಾರ್ಚ ೧೭ ರಂದು ಸಾಯಂಕಾಲ ೪ ಗಂಟೆಗೆ ಮಹಿಳೆಯರಿಂದ ಸಾಮೂಹಿಕ ಕಂಕುಮಾರ್ಚನೆ ನಡೆಯಲಿದೆ. ಮಾರ್ಚ ೧೮ ರಂದು ಬೆಳ್ಳಿಗ್ಗೆ ಕಾಕಡಾರತಿ, ಸಂಕಲ್ಪ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಸಂಜೆ ೭ ಗಂಟೆಗೆ ಭಜನೆ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಮಾರ್ಚ ೧೯ ಗುರುವಾರ ಯುಗಾದಿ ಹಬ್ಬದಂದು ಬೆಳ್ಳಗ್ಗೆ ಸುಪ್ರಭಾತ, ಕಾಕಡಾರತಿ ಹಾಗೂ ಅಭಿಷೇಕ ಮುಂಜಾನೆ ೯ ಗಂಟೆಗೆ ದೇವಿಗೆ ವಿಶೇಷ ಅಲಂಕಾರ ಹಾಗೂ ೧೦ ಗಂಟೆಗೆ ಮಹಿಳೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ ೪ ಗಂಟೆಗೆ ದೇವಿಗೆ ಎರಡನೇ ಅಲಂಕಾರ ಮಾಡಲಾಗುವುದು.
ನಂತರ ಪಲ್ಲಕ್ಕಿ ಉತ್ಸವ ಪ್ರದಕ್ಷಿಣೆ ಶಾಂತಿ ನಿಕೇತನ ನಗರದಲ್ಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕರು ಮತ್ತು ದೇವಸ್ಥಾನದ ಚೇರಮನ್ನರಾದ ಶ್ರೀ ಎನ್ ಎಚ್.ಕೋನರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ.


