ಕಾಗವಾಡ: ಅಭಿವೃದ್ಧಿ ಕೆಲಸದಲ್ಲಿ ಯಾರು ರಾಜಕೀಯ ಮಾಡಬಾರದು ಪಕ್ಷಪಾತವಿಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು ನನ್ನ ಕಳೆದ ೩೦ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಯಾವುದೇ ಪಕ್ಷದವರು ಬಂದರೆ ಅವರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕ್ಷೇತ್ರದ ಅಭಿವೃದ್ದಿಯೇ ನನ್ನ ಪರಮ ಗುರಿ ಎಂದು ನಂಬಿದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು
ಅವರು ಸೋಮವಾರ ದಿ.5ರಂದು ತಾಲ್ಲೂಕಿನ ಕಾಗವಾಡ ಮತಕ್ಷೇತ್ರದ ಜಂಬಗಿ -ಶಿವನೂರ ರಸ್ತೆ ಕಾಮಗಾರಿಗೆ ಗುದಲ್ಲಿ ಪೂಜೆ ಸಲ್ಲಿಸಿ ಮಾತನಾಡುತ್ತಾ ಕಾಗವಾಡ ಕೇತ್ರದ ಮೂಲಭೂತ ಸೌಕರ್ಯಗಳಾದ ರಸ್ತೆ ,ಕುಡಿಯುವ ನೀರು , ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವದಾಗಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರದಲ್ಲಿ ಉಳಿದಿರುವ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡುವದಾಗಿ ಮತ್ತು ಗುಣಮಟ್ಟದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ನೀಗಾವಹಿಸಬೇಕು ಎಂದ ಅವರು
ಕಾಗವಾಡ ಕ್ಷೇತ್ರಕ್ಕೆ ವಿಶೇಷ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ, ಜನಪರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಮುಂಬರುವ ಜೂನ್ ತಿಂಗಳೊಳಗಾಗಿಯೇ ಖಿಳೇಗಾಂವ ಬಸವೇಶ್ವರ ಏತನೀರಾವರಿಯೋಜನೆಯನ್ನುಪೂರ್ಣಗೊಳಿಸಿ ಕಾಲುವೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.
ಇ ಸಂದರ್ಭದಲ್ಲಿ ಜಿಪಂ ಎ ಇಇ ಅಧಿಕಾರ ವೀರಣ್ಣ ವಾಲಿ ಮುಖಂಡರಾದ ವಿನಾಯಕ ಬಾಗಡಿ,ಯಶವಂತ ಪಾಟೀಲ, ಬಸು ಮಾಳಿ,ರವಿ ವಾಘಮೋರೆ,ಗೋಪಾಲ ಕೋಳೆಕರ, ರಾಜೇಂದ್ರ ಪಾಟೀಲ, ಅನೀಕೇತ ಪಾಟೀಲ ,ಪ್ರಕಾಶ ಜಾಧವ, ಶಿವಾನಂದ ಬಂಡಿವಡ್ಡರ ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು.
ಪೊಟು ಶೀರ್ಷಿಕೆ: 5ಐನಾಪುರ1 ಜಂಬಗಿ -ಶಿವನೂರ ರಸ್ತೆ ಕಾಮಗಾರಿಗೆ ಗುದಲ್ಲಿ ಪೂಜೆ ಸಲ್ಲಿಸುತ್ತಿರುವ ಶಾಸಕ ರಾಜು ಕಾಗೆ ಜಿಪಂ ಎ ಇ ಇ ಅಧಿಕಾರ ವೀರಣ್ಣ ವಾಲಿ ಮುಖಂಡರಾದ ವಿನಾಯಕ ಬಾಗಡಿ,ಯಶವಂತ ಪಾಟೀಲ, ಅವರ ಚಿತ್ರದಲ್ಲಿ ಕಾಣಬಹುದು.