ಬಳ್ಳಾರಿ ಜೂನ್ 19 : ನಗರದ ಈದ್ಗಾ ಮೈದಾನದ ಹತ್ತಿರ ಇರುವ ಆದರ್ಶ ವಿದ್ಯಾಲಯಕ್ಕೆ ಇತ್ತೀಚೆಗೆ ಶಾಲಾ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ಇತ್ತೀಚೆಗೆ ಈ ಶಾಲಾ ಅಭಿವೃದ್ಧಿ ಸಮಿತಿಯ ಅವಧಿ ಮುಗಿದಿದ್ದು ಹೊಸ ಸಮಿತಿಯ 9 ಜನ ಸದಸ್ಯರನ್ನು ಆಯ್ಕೆ ಮಾಡಿ ಇಂದು ಶಾಲೆಯ ಮುಖ್ಯ ಗುರುಗಳು ಪ್ರಕಟಣೆಯನ್ನು ನೀಡಿದ್ದಾರೆ. ಈ ಒಂಬತ್ತು ಜನರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮತ್ತು ಒಬ್ಬ ಉಪಾಧ್ಯಕ್ಷರನ್ನಾಗಿ, ಆರಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರಕ್ರಿಯೆಯಲ್ಲಿ ನಾ 408 ವಿದ್ಯಾರ್ಥಿಗಳ ಮುನ್ನೂರಕ್ಕೂ ಹೆಚ್ಚು ಪೋಷಕರು ಭಾಗವಹಿಸಿ ಇಲಾಖ ನಿಯಮನುಸಾರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇತರೆ ಹಿಂದುಳಿದ ವರ್ಗ 2ರ ಅಡಿಯಲ್ಲಿ ಕೆ ಹನುಮಂತಪ್ಪ ಇವರನ್ನು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಆದರ್ಶ ವಿದ್ಯಾಲಯದ ಮುಖ್ಯ ಉಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.