ಜೀ ಕನ್ನಡವಾಹಿನಿ ಸರಿಗಮಪದ ೨೧ ವಿಜೇತೆ ಶಿವಾನಿಗೆ ಸನ್ಮಾನ

Ravi Talawar
ಜೀ ಕನ್ನಡವಾಹಿನಿ ಸರಿಗಮಪದ ೨೧ ವಿಜೇತೆ ಶಿವಾನಿಗೆ ಸನ್ಮಾನ
WhatsApp Group Join Now
Telegram Group Join Now
ಬೀದರ ಜೂನ್ ೨೩ ರಂದು ಸಂಜೆ ೬ ಗಂಟೆಗೆ ಬಸವ ಕೇಂದ್ರ ವಿದ್ಯಾನಗರ ಕಾಲೋನಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆ ಮಾಡಿರುವ ಡಾ. ಜಯದೇವಿ ತಾಯಿ ಲಿಗಾಡೆ ರವರ ಜಯಂತಿ ವಿಚಾರಗೋಷ್ಠಿ  ಅಭಿನಂದನ ಸಮಾರಂಭದಲ್ಲಿ ಕರ್ನಾಟಕದ ಕರೀಟ ಬೀದರ ಜಿಲ್ಲೆಯಿಂದ ಜೀ ಕನ್ನಡ ವಾಹಿನಿ ಆಯೋಜನೆ ಮಾಡಿರುವ ಸರಿಗಮಪ ೨೧ ರಲ್ಲಿ ಸ್ಪರ್ಧೆ ಮಾಡಿ, ಭಾವಗೀತೆ ಭಕ್ತಿಗೀತೆ ಸಿನಿಮಾಗೀತೆ ನಾಡು ನುಡಿ ಗೀತೆ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ನಾಡಿನ ದೇಶದ ಮನಮೇಚ್ಚಿದ ಸಂಗೀತ ಗಾಯಕಿಯಾಗಿ ಹೊರಹೊಮ್ಮಿರುವ ಕು. ಶಿವಾನಿ ಶಿವದಾಸ ಸ್ವಾಮಿ ರವರಿಗೆ ಅಭಿನಂದನಾ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಚನ್ನಶೇಟ್ಟಿ ರವರ ನೇತ್ರತ್ವದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷರು, ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕರಾದ ಡಾ. ಸುಬ್ಬಣ್ಣ ಕರಕನಳ್ಳಿ ಸನ್ಮಾನ ಮಾಡಿದರು. ಮಾಜಿ ವಿಧಾನ ಪರಿಷತ್ತು ಸದಸ್ಯರಾದ ಶ್ರೀ ಅರವಿಂದಕುಮಾರ ಅರಳಿ, ಡಾ. ಮನ್ಮತ ಡೋಳೆ, ಭಾಷಾಂತರ  ನಿರ್ದೇಶನಾಲಯ ಬೆಂಗಳೂರು  ಉಪನಿರ್ದೇಶಕರಾದ  ಭಕ್ತರಾಜ ಪಾಟೀಲ್, ರಾಜ್ಯ ಸರ್ಕಾರಿ ನೌಕರ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರಕುಮಾರ ಗಂದಗೆ, ಅನುಧಾನಿತ ಪದವಿ ಪುರ್ವ ಶಿಕ್ಷಣ ಇಲಾಖೆ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ. ವಿಜಯಕುಮಾರ ಕೆ ಪಾಟೀ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕ ಅಧ್ಯಕ್ಷರಾದ ಡಾ. ಟಿ ಎಂ ಮಚ್ಚೆ, ಉಮೇಶ ಜಾಬ್ ಡಾ. ಬಸವರಾಜ ಬಲ್ಲೂರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article