ಕತ್ರಾ, ಜೂ.7: ಪ್ರಧಾನಿ ಮೋದಿ ಅವರು ನೆನ್ನೆ ಶುಕ್ರವಾರ (ಜೂ.6) ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಚೆನಾಬ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದರ ನಂತರ ಪ್ರಧಾನಿ ಕತ್ರಾ-ಶ್ರೀನಗರ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದಾರೆ. ಈ ವೇಳೆ ಸಭಾ ಕಾರ್ಯಕ್ರಮವನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಸೇರಿದಂತೆ ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಕೂಡ ಭಾಗವಹಿಸಿದರು. ಈ ವೇಳ ಜಮ್ಮು -ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಹೇಳಿದರು. ಪ್ರಧಾನಿ ಮೋದಿಯ ಮುಂದೆ ಈ ಬೇಡಿಕೆಯನ್ನು ಸೂಕ್ಷ್ಮವಾಗಿ ಇಟ್ಟಿದ್ದಾರೆ. ಈ ವೇಳೆ 2014ರಲ್ಲಿ ತಮ್ಮ ಮೊದಲ ಸರ್ಕಾರದ ಕೊನೆಯ ಕಾರ್ಯಕ್ರಮವಾದ ಕತ್ರಾ ರೈಲು ನಿಲ್ದಾಣದ ಉದ್ಘಾಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಅಬ್ದುಲ್ಲಾ, ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲ್ವರು ಜನರು ಕೂಡ ವೇದಿಕೆಯಲ್ಲಿರುವುದು ಕಾಕತಾಳೀಯ ಎಂದು ಹೇಳಿದ್ದಾರೆ.
ಜಮ್ಮು -ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು: ಮೋದಿಗೆ ಒಮರ್ ಬೇಡಿಕೆ
