ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ದಿನಾಚರಣೆಯನ್ನು ದಿನಾಂಕ ೨೧.೦೬.೨೦೨೫ ರಂದು ಆಚರಿಸಲಾಯಿತು. ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ಈ ರ್ಷದ ಯೋಗ ದಿನಾಚರಣೆಯನ್ನು ಒಂದು ಭೂಮಿ ಹಾಗೂ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋ?ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು. ಈ ನಿಮಿತ್ಯ ಆಯೋಜಿಸಿದ ಯೋಗಾಭ್ಯಾಸದ ಅಧಿವೇಶನದಲ್ಲಿ ವಿಜ್ಞಾನಿ ಎಸ್. ಎಮ್. ವಾರದ ಯೋಗಾಭ್ಯಾಸ ಬೋಧಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಸಿಬ್ಬಂದಿಗಳು, ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಕಾರ್ಮಿಕರು ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲರೂ ಯೋಗದ ವಿವಿಧ ಆಸನಗಳನ್ನು ಹಾಗೂ ಪ್ರಾಣಾಯಾಮದ ಹಂತಗಳಾದ ಬಸ್ತ್ರಿಕಾ, ಕಪಾಲಬಾತಿ, ಅನುಲೋಮ ವಿಲೋಮ, ಬ್ರಾಹ್ಮರಿ ಹಾಗೂ ಓಂಕಾರಗಳನ್ನು ಅಭ್ಯಾಸ ಮಾಡಿದರು.