ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ ಇಂದ್ರೇಶ್ ಕುಮಾರ್ ಯು-ಟರ್ನ್

Ravi Talawar
ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ  ಇಂದ್ರೇಶ್ ಕುಮಾರ್  ಯು-ಟರ್ನ್
WhatsApp Group Join Now
Telegram Group Join Now

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ  ಈ ಬಾರಿ ಬಿಜೆಪಿ 2014 ಮತ್ತು 2019ರ ಚುನಾವಣೆಗಿಂತಲೂ ಹೀನಾಯ ಪ್ರದರ್ಶನ ನೀಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಆರ್​ಎಸ್​ಎಸ್​ ನಾಯಕ ಇಂದ್ರೇಶ್ ಕುಮಾರ್ , ತನ್ನ ಭಕ್ತರಾದರೂ ದುರಹಂಕಾರ ಹೊಂದಿದ್ದವರಿಗೆ ರಾಮನು 241 ಸ್ಥಾನ ಬರುವಂತೆ ಮಾಡಿದನು. ರಾಮನ  ಮೇಲೆ ನಂಬಿಕೆ ಇಲ್ಲದವರಿಗೆ 234 ಸ್ಥಾನಗಳನ್ನು ಮಾತ್ರ ನೀಡಿದನು. ಇದು ದೇವರ ನ್ಯಾಯ ಎಂದು ಹೇಳಿಕೆ ನೀಡಿದ್ದರು. ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಬಿಜೆಪಿಯನ್ನು ಟೀಕಿಸಿದ ಮರುದಿನವೇ ಇಂದ್ರೇಶ್ ಕುಮಾರ್ ಕೂಡ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್, ರಾಮನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ, ಮಂದಿರ ನಿರ್ಮಾಣಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದಾರೆ ಎಂದು ಹೇಳುವ ಮೂಲಕ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article