ಬೆಳಗಾವಿ. ಮುಂಬೈ ನಗರದಲ್ಲಿ 2025ರಲ್ಲಿ ಆಯೋಜಿಸಲಾದ ಇಂಡಿಯನ್ ಟ್ಯಾಲೆಂಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಕ್ರೈಸ್ಟ್ ಕಾನ್ವೆಂಟ್ ಶಾಲೆಯ ಗೌರವಾನ್ವಿತ ಪ್ರಾಂಶುಪಾಲರಿಗೆ “ಉತ್ತಮ ಪ್ರಾಂಶುಪಾಲ” ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅವರ ಆದರ್ಶ ನಾಯಕತ್ವ, ಶಿಸ್ತಿನ ಆಡಳಿತ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆ ಹಾಗೂ ಶಾಲೆಯ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.
ಈ ಪ್ರಶಸ್ತಿ ಕ್ರೈಸ್ಟ್ ಕಾನ್ವೆಂಟ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಪಾರ ಹೆಮ್ಮೆ ತಂದಿದ್ದು, ಶಾಲೆಯ ಶೈಕ್ಷಣಿಕ ಮೌಲ್ಯಗಳು ಮತ್ತು ಸಾಧನೆಯನ್ನು ಮತ್ತೊಮ್ಮೆ ಬೆಳಗಿಸಿದೆ.ಮುಂಬೈ ನಗರದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಘಟಪ್ರಭಾ ಕ್ರೈಸ್ಟ್ ಕಾನ್ವೆಂಟ್ ಶಾಲೆಯ ಪ್ರಾಂನ್ಸುಪಾಲ್ ಶ್ರೀಮತಿ ವೀಣಾ ಆರ್ ಬೆಂಗಳೂರ ಪ್ರಶಸ್ತಿ ಸ್ವೀಕರಿಸಿದರು.


