ಕಾರ್ಯಗಾರಗಳು ಶಿಕ್ಷಣದಲ್ಲಿ ಮುಖ್ಯಪಾತ್ರವನ್ನು ವಹಿಸಲಿವೆ : ಡಾ|| ಟಿ. ಹನುಮಂತರೆಡ್ಡಿ

Pratibha Boi
ಕಾರ್ಯಗಾರಗಳು ಶಿಕ್ಷಣದಲ್ಲಿ ಮುಖ್ಯಪಾತ್ರವನ್ನು ವಹಿಸಲಿವೆ : ಡಾ|| ಟಿ. ಹನುಮಂತರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ,ಆ.೦೨: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ೫ ದಿನಗಳ ಕಾಲ ಜರಗುವ “ಎಐ & ಮಷಿನ್ ಲರ್‌ನಿಂಗ್ ಫಾರ್ ರಿಯಲ್ ರ‍್ಡ್ ಪ್ರಾಬಲಮ್ ಸಾಲ್‌ವಿಂಗ್” ಕಾರ್ಯಗಾರಕ್ಕೆ ಡಾ|| ಟಿ. ಹನುಮಂತರೆಡ್ಡಿ ಚಾಲನೆ ನೀಡಿದರು.
 ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ  ಡಾ|| ರಾಜೇಶ್ವರಿ ಜಂತಕಲ್ ಪ್ರಾಧ್ಯಪಕರು ಐ.ಎಸ್.ಇ ವಿಭಾಗ, ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ಮಾತನಾಡುತ್ತಾ “ಈ ರೀತಿಯ ಕಾರ್ಯಗಾರಗಳು ಶಿಕ್ಷಣ ಸಂಸ್ಥೆಗಳ ಅಧ್ಯಾಪಕ ವೃಂದಕ್ಕೆ ಸಂಶೋದನೆಗೆ ಉಪಯುಕ್ತವಾಗಲಿದೆ. ಈ ರೀತಿಯ ಕಾರ್ಯಗಾರಗಳು ಶಿಕ್ಷಣದಲ್ಲಿ ಮುಖ್ಯಪಾತ್ರವನ್ನು ವಹಿಸಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಕಾರ್ಯಗಾರದಲ್ಲಿ ಎಲ್ಲಾ ವಿಭಾಗದ ಪ್ರಾಧ್ಯಪಕರು ಹಾಗೂ ಬೇರೆ ಕಾಲೇಜಿನ ಪ್ರಾಧ್ಯಪಕರುಗಳು ಭಾಗವಹಿಸಿದ್ದರು.
ಉಪಪ್ರಾಂಶುಪಾಲರಾದ ಡಾ|| ಸವಿತ ಸೂನೊಳಿ ಮಾತಾನಾಡುತ್ತಾ ಅಧ್ಯಾಪಕರಿಗೆ ಮಾರ್ಗದರ್ಶನ ನೀಡುವಲ್ಲಿ ಈ ರೀತಿಯ ಕಾರ್ಯಗಾರಗಳು ಮುಖ್ಯಪಾತ್ರವನ್ನು ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ|| ಪ್ರಭಾವತಿ .ಎಸ್ Pಡಿoಜಿ. & ಊಔಆ ಆeಠಿಣ. oಜಿ ಇಅಇ, ಇವರು ಮಾತನಾಡಿ ಅಧ್ಯಾಪಕರು ಸಂಶೋದನೆ ರಂಗದಲ್ಲಿ ಕ್ರಿಯಾ ಶೀಲರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಬಳ್ಳಾರಿಯ ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನೆಕುಂಟೆ ಬಸವರಾಜ, ವಿ.ವೀ.ಸಂಘದ ಅಧ್ಯಕ್ಷರಾದ ಡಾ|| ಕಣೆಕಲ್ ಮಹಾತೇಂಶ್, ವಿ.ವೀ.ಸಂಘದ ಕಾರ್ಯದರ್ಶಿಗಳಾದ ಡಾ|| ಅರವಿಂದ್ ಪಾಟೀಲ್, ವಿ.ವೀ.ಸಂಘದ ಸಹ-ಕಾರ್ಯದರ್ಶಿಗಳಾದ ಯಾಲ್ಪಿ ಮೇಟಿ ಪೊಂಪನಗೌಡ, ಖಜಾಂಚಿಗಳಾದ ಬೈಲುವದ್ದಿಗೇರಿ ರ‍್ರಿಸ್ವಾಮಿ, ಈ ಕ್ರಾರ್ಯಕ್ರಮಕ್ಕೆ ಶುಭಕೋರಿದರು. ಆಡಳಿತ ಮಂಡಳಿಯ ಸದಸ್ಯರಾದ ಪ್ರಭು ಸ್ವಾಮಿ ಬಿ.ಎಂ, ಮತ್ತು ಬಾಡದ ಪ್ರಕಾಶ್ ಈ ಕಾರ್ಯಗಾರವನ್ನು ಆಯೋಜಿಸಿದ್ದಾಕ್ಕಾಗಿ ಅಭಿನಂದಿಸಿದರು.
 ಉಪಪ್ರಾಂಶುಪಾಲರಾದ ಡಾ|| ಸವಿತ ಸೊನೊಳಿ, ಎಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ|| ಪ್ರಭಾವತಿ .ಎಸ್, ವಿವಿಧ ವಿಭಾಗದ ಮುಖ್ಯಸ್ಥರುಗಳು, ಪ್ರಾಧ್ಯಪಕ ವೃಂದ, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
  ಅಶ್ವಿನಿ .ಕೆ ಮತ್ತು ಸಂತೋಷ್ ಮುಗಳಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article