ಹುಕ್ಕೇರಿಯಲ್ಲಿ ಜನಿವಾರ ಅಪಚಾರ ಖಂಡಿಸಿ ಮನವಿ

Ravi Talawar
ಹುಕ್ಕೇರಿಯಲ್ಲಿ ಜನಿವಾರ ಅಪಚಾರ ಖಂಡಿಸಿ ಮನವಿ
WhatsApp Group Join Now
Telegram Group Join Now

ಹುಕ್ಕೇರಿ; ಸಿ.ಇ.ಟಿ ಪರೀಕ್ಷೆ ಸಮಯದಲ್ಲಿ ಜನಿವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗುಸುವಂತೆ ಒತ್ತಾಯಿಸಿ ಹುಕ್ಕೇರಿ ತಾಲೂಕಿನ ಜನಿವಾರ ದರಿಸುವ ಸಮುದಾಯದವರಿಂದ ಪ್ರತಿಭಟನೆ ನಡೆಸಿ ಕೆಲ ಸಮಯ ಕೋರ್ಟ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ ತಹಸಿಲ್ದಾರ ಮಂಜುಳಾ ನಾಯಕ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಮಾಜದ ಮುಖಂqರಾದ ಗುರು ಕುಲಕರ್ಣಿ ಬಾಹುಬಲಿ ನಾಗನೂರಿ , ಸುರೇಶ ಉಪಾಸಿ, ಬಿಬಿ ರಜಪೂತ ಗಜಾನನ ಬಡಿಗೇರ ಜಯಸಿಂಗ ಸನದಿ , ರೋಹಿತ ಚೌಗಲಾ, ಮಾತನಾಡಿ ಬೀದರ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿಗಳು ದುರುದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ್ದಾರೆ,ಅಲ್ಲದೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದರು.

ಜನಿವಾರ ಧರಿಸುವ ವಿವಿಧ ಸಮಾಜದ ಮುಖಂಡರಾದ ಅರವಿಂದ ದೇಶಪಾಂಡೆ, ಪ್ರಸಾದ ಖಾಡೆ, ಸಂಜೀವ ಮುತಾಲಿಕ, ಸಂತೋಷ ಸಾವಳಗಿ, , ಶ್ರೀಕಾಂತ ಬಡಿಗೇರ, ವಿಜಯ ದೇಸಾಯಿ, ಹನುಮಂತ ಇನಾಮದಾರ, ಕೆ.ಬಿ ಬಡಿಗೇರ, ಮಾರುತಿ ಪವಾರ ವೀವೇಕ ಪುರಾಣಿಕ ರವೀಂದ್ರ ಬಡಿಗೇರ, ಪದ್ಮನಾಭಣ ಪೋತದಾರ, ಸಂಜು ಬಸ್ತವಾಡ, ಶ್ರೀಧರ ಖತಗಲಿ, ಹನಮಂತ ಇನಾಮದಾರ, ಪ್ರಕಾಶ ಮುತಾಲಿಕ, ಸಿದ್ದು ಬೆನಾಡಿಕರ ಮೊದಲಾದವರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article