ಬಳ್ಳಾರಿ,ಫೆ.18:.: ಶ್ರದ್ಧೆ ಶ್ರಮ ಆಸಕ್ತಿಯಿಂದ ಉನ್ನತ ಮಟ್ಟಕ್ಕೆ ಬರಬೇಕೆಂದು ವಿದ್ಯಾರ್ಥಿಗಳಿಗೆ ವಿಮ್ಸ್ ನಿರ್ದೇಶಕ ಟಿ.ಗಂಗಾಧರಗೌಡ ತಿಳಿಸಿದರು.
ನಗರದಲ್ಲಿ ನಾಲ್ಕನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮತ್ತೊಬ್ಬ ಅತಿಥಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ವಿದಾರ್ಥಿಗಳಲ್ಲಿನ ಸೂಕ್ಷ್ಮವಾದ ಪ್ರತಿಭೆಗಳನ್ನು ಗುರುತಿಸಿ ಹೊರ ತೆಗೆಯಬೇಕೆಂದು ಹೇಳಿದರು.
ವೀ ವಿ ಸಂಘದ ಕಾರ್ಯದರ್ಶಿ ಡಾ|| ಅರವಿಂದ ಪಾಟೀಲ್ ಮಾತನಾಡಿ, ಆಟದ ಮೂಲಕ ಕಲಿಕೆಯನ್ನು ಕಲಿಸಬೇಕೆಂದು ತಿಳಿಸಿದರು.
ಶಾಲೆಯ ಅಧ್ಯಕ್ಷರು ಜಿ ಬಿ ಸದಸ್ಯರು ಹಾಗೂ ಸಂಘದ ಎಲ್ಲಾ ಎಂ ಸಿ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗದವರು ಹಾಗೂ ಪೋಷಕರು ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು


