ಮುಸ್ಲಿಮರು, ಕ್ರಿಶ್ಚಿಯನ್ನರ ಕೈಗೆ ಒಂದೊಂದೆ ರಾಜ್ಯ ಹೋದರೆ ಹಿಂದುಗಳು ದೇಶ ಬಿಡಬೇಕಾಗುತ್ತದೆ: ಪ್ರತಾಪ್ ಸಿಂಹ

Ravi Talawar
ಮುಸ್ಲಿಮರು, ಕ್ರಿಶ್ಚಿಯನ್ನರ ಕೈಗೆ ಒಂದೊಂದೆ ರಾಜ್ಯ ಹೋದರೆ ಹಿಂದುಗಳು ದೇಶ ಬಿಡಬೇಕಾಗುತ್ತದೆ: ಪ್ರತಾಪ್ ಸಿಂಹ
WhatsApp Group Join Now
Telegram Group Join Now

ಮೈಸೂರು (ಸೆ.23): ಕರ್ನಾಟಕದಲ್ಲಿ ಗಣೇಶೋತ್ಸವನ್ನು ವ್ಯವಸ್ಥಿತವಾಗಿ ಮುಗಿಸುವ ಪ್ಲಾನ್ ನಡೆದಿದೆ. ಮುಸ್ಲಿಮರೇ ಹಿಂದೂಗಳನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಹಿಂದೂಗಳಿಗೆ ಆಕ್ರಮಣ ಬರಲ್ಲ ಅಂದು ಕೊಳ್ಳಬೇಡಿ. ಮುಸ್ಲಿಮರೇ ನೀವು ಇನ್ನೂ ಚಂದ್ರನ ಆರಾಧನೆ ಮಾಡ್ತಿದ್ದಿರಿ. ನಾವು ಚಂದ್ರನ ಮೇಲೆಯೆ ಹೋಗಿ ಬಂದಿದ್ದೇವೆ ನೆನಪಿರಲಿ. ಹಿಂದೂಗಳ ಕೈಗೆ ಕಲ್ಲು ಬಂದರೆ ಮುಸ್ಲಿಮರೆ ನಿಮಗೆ ಉಳಿಗಾಲ ಇರಲ್ಲ. ನೀವು ಹದ್ದುಬಸ್ತಿನಲ್ಲಿರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾವಣಗೆರೆ ಗಣೇಶೋತ್ಸವದ ವೇಳೆ ಹಿಂದೂಗಳನ್ನು ಹತ್ಯೆ ಮಾಡುವ ಸಂಚಿತ್ತು ಎಂದು ಪೊಲೀಸರೆ ಹೇಳಿದ್ದಾರೆ. ರಾಜ್ಯ ಸರಕಾರ ಕುಮ್ಮಕಿನಿಂದ ಮುಸ್ಲಿಂರು ನಡೆಸುತ್ತಿರುವ ವ್ಯವಸ್ಥಿತ ದಾಳಿ ಇದು. ಗಲಭೆ ಹೆಸರಿನಲ್ಲಿ ಗಣೇಶೋತ್ಸವ ನಿಲ್ಲಿಸಲು ವ್ಯವಸ್ಥಿತ ಪ್ಲಾನ್ ಸಿದ್ದವಾಗುತ್ತಿದೆ. ಕರ್ನಾಟಕದಲ್ಲಿ ಗಣೇಶೋತ್ಸವನ್ನು ವ್ಯವಸ್ಥಿತವಾಗಿ ಮುಗಿಸುವ ಪ್ಲಾನ್ ನಡೆದಿದೆ ಎಂದು ಕಿಡಿಕಾರಿದ್ದಾರೆ.

ಮುಸ್ಲಿಮರೇ ಹಿಂದೂಗಳನ್ನು ಅಂಡರ್ ಎಸ್ಟಿಮೇಟ್ ಮಾಡಬೇಡಿ. ಹಿಂದೂಗಳಿಗೆ ಆಕ್ರಮಣ ಬರಲ್ಲ ಅಂದು ಕೊಳ್ಳಬೇಡಿ. ಮುಸ್ಲಿಮರೇ ನೀವಿನ್ನೂ ಚಂದ್ರನ ಆರಾಧನೆಯನ್ನು ಮಾಡುತ್ತಿದ್ದೀರಿ. ಆದರೆ, ನಾವು ಚಂದ್ರನ ಮೇಲೆಯೆ ಹೋಗಿ ಬಂದಿದ್ದೇವೆ ನೆನಪಿರಲಿ. ಹಿಂದೂಗಳ ಕೈ ಗೆ ಕಲ್ಲು ಬಂದರೆ ಮುಸ್ಲಿಮರಿಗೆ ಉಳಿಗಾಲ ಇರಲ್ಲ. ಇದನ್ನು ಅರಿತುಕೊಂಡು ಎಚ್ಚರಿಕೆಯಿಂದ ಹದ್ದುಬಸ್ತಿನಲ್ಲಿ ಇರಿ ಎಂದರು.

ತಿರುಪತಿ ಲಡ್ಡು ವಿಚಾರದ ಬಗ್ಗೆ ಮಾತನಾಡಿ, ಜಮ್ಮು ಕಾಶ್ಮೀರ ಮುಸ್ಲಿಂರ ಕೈಗೆ ಹೋಗ್ತಿದ್ದಂತೆ ಹಿಂದೂಗಳನ್ನು ಅಲ್ಲಿಂದ ಓಡಿಸಲಾಯಿತು. ಆಂಧ್ರದಲ್ಲಿ ರೆಡ್ಡಿ ಎಂಬ ಕ್ರೈಸ್ತನ ಕೈಗೆ ಸರಕಾರ ಸಿಕ್ಕ ಕೂಡಲೇ ತಿರುಪತಿ ಲಡ್ಡು ಹಂದಿ‌ ಕೊಬ್ಬು ಹಾಕಲಾಗಿದೆ. ಮುಸ್ಲಿಮರು, ಕ್ರಿಶ್ಚಿಯನ್ನರ ಕೈಗೆ ಹೀಗೆ ಒಂದೊಂದೆ ರಾಜ್ಯ ಹೋಗಿ ಬಿಟ್ಟರೆ ಹಿಂದುಗಳು ದೇಶ ಬಿಡಬೇಕಾಗುತ್ತದೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article