ತಾಲೂಕಿನ ಇಟಗಿ, ಸೂಡಿ ಮತ್ತು ಹಾಲಕೆರೆ ಗ್ರಾಪಂ ಗಳಿಗೆ ಖುದ್ದು ತಾಪಂ ಎಡಿ ಅವರೇ ಭೇಟಿ ನೀಡಿ ಇಂದು ಇ-ಕವೈಸಿ ಕಾರ್ಯದಲ್ಲಿ ತೊಡಗಿಸಿಕೊಂಡು ಕೂಲಿಕಾರರಲ್ಲಿ ತಿಳುವಳಿಕೆ ಮೂಡಿಸಿದರು.
ಇಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರ ಮನೆಗಳಿಗೆ ತೆರಳಿದ ಎಡಿ ಬಸವರಾಜ ಬಡಿಗೇರ ಅವರು, ನರೇಗಾ ಕೆಲಸದ ಬದುವಿನ ಕೆಲಸ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕೆಲಸ ಮಾಡಲು ಇ-ಕೆವೈಸಿ ಕಡ್ಡಾಯವಾಗಿದೆ. ಇವಾಗಲೇ ಇ-ಕೆವೈಸಿ ಮಾಡಿಸಿಕೊಂಡಲ್ಲಿ ನರೇಗಾದಲ್ಲಿ ಕೆಲಸ ಮಾಡಲು ಅವಕಾಶವಿದೆ. ಇ-ಕೆವೈಸಿ ಮಾಡಿಸದಿದ್ದರೆ ನರೇಗಾದಲ್ಲಿ ಕೆಲಸ ಮಾಡಲು ಬರಲ್ಲ ಅಂತ ತಿಳಿಸಿದರು.
ಸೂಡಿ ಗ್ರಾಪಂ ಗೆ ಭೇಟಿ ನೀಡಿದ ಬಸವರಾಜ ಬಡಿಗೇರ ಅವರು, ಇ-ಕೆವೈಸಿ ಕಾರ್ಯದಲ್ಲಿ ತೊಡಿಗಿರುವ ಸಿಬ್ಬಂದಿಗಳ ಕಾರ್ಯವನ್ನು ಪರಿಶೀಲಿಸಿದರು. ಸರ್ವರ್ ಸಮಸ್ಯೆಯಿರುವ ಬಗ್ಗೆ ಸಿಬ್ಬಂದಿ ಬಡಿಗೇರ ಅವರ ಗಮನಕ್ಕೆ ತಂದರು. ಬೆಳಿಗ್ಗೆ ೬ ರಿಂದ ೮ ಗಂಟೆ ಒಳಗಾಗಿ ಹೆಚ್ಚಿನ ಇ-ಕೆವೈಸಿ ಮಾಡಿ ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಇರಲ್ಲ ಅಂತ ತಿಳಿಸಿದರು.
ಹಾಲಕೆರೆ ಗ್ರಾಪಂ ಗೆ ಭೇಟಿ ನೀಡಿದ ಬಡಿಗೇರ ಅವರು, ತಾಲೂಕಿನಲೇ ಕಡಿಮೆ ಪ್ರಗತಿ ಸಾಧಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಮುಂದಿನ ಎರಡು ದಿನಗಳಲ್ಲಿ ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಪ್ರಕಾಶ ಮ್ಯಾಕಲ್, ಇಟಗಿ, ಸೂಡಿ, ಹಾಲಕೆರೆ ಗ್ರಾಪಂ ಗಳ ಪಿಡಿಒ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.