ಮಂಡ್ಯ, ಅಕ್ಟೋಬರ್ 14: ಆರ್ಎಸ್ಎಸ್ ಚಟುವಟಿಕೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ವಿಚಾರ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ಹೊತ್ತಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ‘I LOVE RSS’ ಪೋಸ್ಟರ್ ಅಭಿಯಾನ ಶುರುಮಾಡಲಾಗಿದೆ. ‘I LOVE RSS’ ಎಂಬ ಪೋಸ್ಟರ್ ಹಿಡಿದು ಘೋಷಣೆ ಕೂಗಿದ ಆರ್ಎಸ್ಎಸ್ ಸ್ವಯಂ ಸೇವಕರು, ವಾಹನಗಳು, ಅಂಗಡಿಗಳ ಮೇಲೆ ಪೋಸ್ಟರ್ ಅಂಟಿಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು. ದೇಶ ವಿರೋಧಿ ಸಂಘಗಳನ್ನು ನಿಷೇಧಿಸಿ, ಆದರೆ ದೇಶ ಭಕ್ತ ಸಂಘಟನೆಗಳನ್ನಲ್ಲ ಎಂದು ಘೋಷಣೆ ಕೂಗಿದರು.