ನನಗೆ ಛೋಟಾ ಸಹಿ ವ್ಯವಹಾರ ಗೊತ್ತಿಲ್ಲ: ವಿಜಯೇಂದ್ರ ಸಚಿವ ಮಧುಬಂಗಾರಪ್ಪ ತಿರುಗೇಟು

Ravi Talawar
ನನಗೆ ಛೋಟಾ ಸಹಿ ವ್ಯವಹಾರ ಗೊತ್ತಿಲ್ಲ: ವಿಜಯೇಂದ್ರ ಸಚಿವ ಮಧುಬಂಗಾರಪ್ಪ ತಿರುಗೇಟು
WhatsApp Group Join Now
Telegram Group Join Now

ಮೈಸೂರು”ನನ್ನ ಕೂದಲು ಹಾಗೂ ತಲೆಯೊಳಗಿನ ಮೆದುಳು ಚನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿಯೂ ಇಲ್ಲ ಹಾಗೂ ಅವರಂತೆ ಛೋಟಾ ಸಹಿ ವ್ಯವಹಾರ ಗೊತ್ತಿಲ್ಲ” ಎಂದು ಬಿಜೆಪಿ ರಾಜಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಟೀಕೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದರು.

ಮಂಗಳವಾರ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರೀತಿಬ್ಬೇಗೌಡ ಪರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ”ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಗಡ್ಡದ ಬಗ್ಗೆ ಮಾತನಾಡಿ ಬಿಜೆಪಿಯವರು 130 ಸ್ಥಾನದಿಂದ 60 ಸ್ಥಾನಕ್ಕೆ ಬಂದಿದ್ದಾರೆ. ಈಗ ನನ್ನ ಕೂದಲಿನ ಬಗ್ಗೆ ಮಾತನಾಡಿ, 26 ಸ್ಥಾನದಿಂದ 6 ಸ್ಥಾನಕ್ಕೆ ಬರುತ್ತಾರೆ ನೋಡಿ” ಎಂದು ವಾಗ್ದಾಳಿ ನಡೆಸಿದರು.

”ಬಿಜೆಪಿಯವರು ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಡ್ಡದ ಬಗ್ಗೆ ಮಾತನಾಡಲಿಲ್ಲ, ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಮಾತನಾಡುವುದಿಲ್ಲ, ನನ್ನ ಹೇರ್ ಸ್ಟೈಲ್ ಬಗ್ಗೆ ಮಾತನಾಡುತ್ತಾರೆ. ನಾನು ಅವರಂತೆ ಶೇ 40ರಷ್ಟು ಕಮಿಷನ್ ಪಡೆದು, ಹೇರ್ ಸ್ಟೈಲ್ ಕಟಿಂಗ್ ಮಾಡಿಸುವ ದುಃಸ್ಥಿತಿ ಬಂದಿಲ್ಲ” ಎಂದು ಶಿಕ್ಷಣ ಸಚಿವರು ತಿರುಗೇಟು ನೀಡಿದರು.

”ಇನ್ನೂ ನನ್ನ ಕೂದಲು ನನ್ನ ತಲೆಯೊಳಗಿನ ಮೆದುಳು ಎರಡು ಚನ್ನಾಗಿದೆ. ಅವರಂತೆ ನನಗೆ ಯಾವುದೇ ದುರ್ಬುದ್ಧಿಯಿಲ್ಲ, ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳೆಯ ಬುದ್ಧಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಫೂರ್ತಿ, ಅವರಿವರ ಮಾತನ್ನು ನಾನು ಕೇಳುವುದಿಲ್ಲ. ಜೂನ್ 4 ಬರಲಿ, ನಂತರ ವಿಜಯೇಂದ್ರನಿಗೆ ಬೇರೆ ಕೆಲಸ ಕೊಡ್ತೀವಿ” ಎಂದು ಟೀಕಿಸಿದರು.

WhatsApp Group Join Now
Telegram Group Join Now
Share This Article