ಘಟಪ್ರಭಾ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್, ದೊಡ್ಡ ಬಳ್ಳಾಪುರ, ಬೆಂಗಳೂರು ಇವರ ಸಹಯೋಗದಲ್ಲಿ ಬಿಸೆಂಟ್ ಪಾರ್ಕ್ ದೊಡ್ಡಬಳ್ಳಾಪುರ ಇಲ್ಲಿ ಜರಗುವ ರಾಜ್ಯ ಮಟ್ಟದ ಟೆಲಿಸ್ಕೋಪ ತರಬೇತಿ ಶಿಬಿರ 2025 ಇದರ ನಾನು ವಿಜ್ಞಾನಿ 2025 ಕ್ಕೆ ಅರ್ಹತೆ ಪರೀಕ್ಷೆಯಲ್ಲಿ ಪಾಸಾಗಿರುವ ಗೋಕಾಕ ತಾಲೂಕಿನ ಗೋಕಾಕ – ಮೂಡಲಗಿ ತಾಲೂಕಿನ ಪಾಮಲದಿನ್ನಿ ಗ್ರಾಮದ ವಿಜಯ ಶಾಲಿನಿ ವೀರಪ್ಪ ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕು. ಕೀರ್ತಿ ಲಕ್ಷ್ಮಣ ಕಮತಿ ಹಾಗೂ ಕು. ಶ್ರವಂತಿ ರಾಜು ದಂಡಿನ ಇವರು ನಾನು ವಿಜ್ಞಾನಿ ಶಿಬಿರಕ್ಕೆ ಪಾಲ್ಗೊಳ್ಳಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಹಿರೇಮಠ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಮಾರುತಿ ವೀರಪ್ಪ ವಿಜಯನಗರ, ರಂಗನಗೌಡ ಗೋಡೇರ ಸಿ ಆರ್ ಪಿ ಘಟಪ್ರಭಾ ಸಂಸ್ಥೆಯ ಆಡಳಿತಾಧಿಕಾರಿ ಮಾಹಾಂತೇಶ ಮಾರುತಿ ವಿಜಯನಗರ, ರಾಜು ವಾಲಿಕಾರ,ಮಲಕ್ಕಾಜಿ ಕಬ್ಬೂರ,ಲಕ್ಕಪ್ಪಾ ರಾಜಾಪೂರೆ, ಗೋಪಾಲ ಪತ್ತಾರ , ವಿವೇಕ ಹುದ್ದಾರ,ಲಕ್ಷ್ಮಣ ಕಮತಿ,ರಾಜು ದಂಡಿನ,ಸಿದ್ದಪ್ಪಾ ಡಬಾಜ,ಮಾಹಾಂತೇಶ ಜಾಗನೂರ, ವಿನೋದ ದಂಡಿನ ಉಪಸ್ಥಿತರಿದ್ದರು.


