ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸನ್ಮಾನ

Ravi Talawar
ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಸನ್ಮಾನ
WhatsApp Group Join Now
Telegram Group Join Now

ಗದಗ ೧೭: ಗದುಗಿನ ಮಸಾರಿ ಭಾಗದಲ್ಲಿ ಸ್ಥಾಪನೆಗೊಂಡ ಸೂಡಿ ಜೂಕ್ತಿ ಹಿರೇಮಠದ ಶಾಖಾ ಮಠವಾದ ಶ್ರೀ ಜಗದ್ಗುರು  ವಿಶ್ವರಾಧ್ಯರ ಮಂದಿರದಲ್ಲಿ ಲಿಂಗೈಕ್ಯ ಷ.ಬ್ರ.ಕೊಟ್ಟೂರ  ಬಸವೇಶ್ವರ ಶಿವಾಚಾರ್ಯರ ೧೦೬ನೇಯ ಪುಣ್ಯಾರಾಧನೆಯ ಹಾಗೂ ಜಗದ್ಗುರು ವಿಶ್ವರಾಧ್ಯಾರ ಲಿಂಗೋಭದ್ವವ
ಮೂರ್ತಿಗೆ, ನಂದಿ ವಿಗ್ರಹಕ್ಕೆ ಹಾಗೂ ನಾಗದೇವತೆಗೆ ರುದ್ರಾಭಿಷೇಕ ಸಹಸ್ರನಾವಳಿ ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರಾದ ಕನಕದಾಸ ಶಿಕ್ಷಣ ಸಮಿತಿಯ
ಬಿ. ಎಫ್. ದಂಡಿನರವರ ಧರ್ಮಪತ್ನಿ ಮಾಜಿ ಗದಗ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಶಕುಂತಲಾಬಾಯಿ ದಂಡಿನ, ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ,  ಸಂಕೇತ ದಂಡಿನ ಇವರುಗಳಿಗೆ ಧರ್ಮಸಭೆಯ ಮಠಾಧ್ಯಕ್ಷರಾದ ಶ್ರೀ ಷ. ಬ್ರ. ಷಟ್‌ಸ್ಥಳ ಬ್ರಹ್ಮ ಡಾ.
ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಕ್ಷತಾ ನಾಗರಾಜ ದಂಡಿನ, ಜಯಶ್ರೀ ಸೋಮಲಿಂಗಪ್ಪ ಬೆನಕನವಾರಿ ಸೇರಿದಂತೆ ಜುಕ್ತಿ ಹಿರೇಮಠ ಸೂಡಿ ಹಾಗೂ ಜಗದ್ಗುರು ವಿಶ್ವರಾಧ್ಯ ಮಂದಿರದ ಸದ್ಭಕ್ತರು ಹಾಗೂ ಶಿಷ್ಯಂದಿರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article