ಹೊಸಪೇಟೆ :ಹೊಸಪೇಟೆಯ 35ನೇ ವಾರ್ಡ್ ನ ಪಾರ್ವತಿ ನಗರದಲ್ಲಿ ನಗರ ಸಭೆಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ 01 ಕೋಟಿ 37 ಲಕ್ಷದ ವೆಚ್ಚದಲ್ಲಿ 45,000 ಮನೆಗಳಿಗೆ 90,000 ಹಸಿ ಕಸ ಮತ್ತು ಒಣ ಕಸಗಳ ಬಕೆಟ್ ಗಳನ್ನು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಖರೀದಿಸಿರುವ ಬಕೇಟುಗಳನ್ನು ಮನೆ ಮನೆಗೆ ಹಂಚುವ ಕಾರ್ಯಕ್ರಮಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಆರ್. ಗವಿಯಪ್ಪ ರವರು, ಸಾಂಕೇತಿಕವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರು, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪೌರಾಯುಕ್ತರು, ನಗರಸಭೆ ಸಿಬ್ಬಂದಿಗಳು ಸೇರಿದಂತೆ ಮುಖಂಡರಗಳು ಹಾಗೂ 35 ನೇ ವಾರ್ಡಿನ ಸ್ಥಳೀಯರು ಉಪಸ್ಥಿತರಿದ್ದರು.