ಕಾರವಾರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಮೀನುಗಾರರು ಮತ್ತು ದೊಡ್ಡ ಟ್ರಾಲರ್ಗಳ ನಿರ್ವಾಹಕರಿಗೆ ಕಾರವಾರದ ಕರಾವಳಿ ಭದ್ರತಾ ಪಡೆ ಎಚ್ಚರಿಕೆ ನೀಡಿದ್ದು ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳ ಚಲನೆಯ ಮೇಲೆ ನಿಗಾ ಇಡುವಂತೆ ಸೂಚಿಸಿದೆ.
26 ಭಾರತೀಯರ ಜೀವವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭದ್ರತೆ ಸಂಬಂಧ ಚರ್ಚಿಸಲು ಇತ್ತೀಚೆಗೆ ಕಾರವಾರದಲ್ಲಿ ಸಭೆ ಕರೆಯಲಾಗಿತ್ತು. ಕಾರವಾರವು ಭಾರತದ ಅತಿದೊಡ್ಡ ನೌಕಾ ನೆಲೆ ಯಾಗಿದ್ದು INS ಕದಂಬ – ಮತ್ತು ದೇಶದ ಮೊದಲ ವಿಮಾನವಾಹಕ ನೌಕೆ – INS ವಿಕ್ರಮಾದಿತ್ಯ ಇಲ್ಲಿ ನೆಲೆಗೊಂಡಿದೆ.
ಕಾರವಾರ ನೌಕಾ ನೆಲೆಯು ಗೋವಾ, ಕೊಚ್ಚಿ ಮತ್ತು ಮುಂಬೈ ನಂತರ ಶಸ್ತ್ರಾಸ್ತ್ರ ವಿಭಾಗ ಮತ್ತು ಕಾರ್ಯತಂತ್ರದ ನೌಕಾ ರಕ್ಷಣಾ ಸ್ಥಳವಾಗಿದೆ. ಈ ನೆಲೆಯನ್ನು ತರಬೇತಿ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಸಮುದ್ರದಲ್ಲಿ ಯಾವುದೇ ಅನುಮಾನಾಸ್ಪದ ದೋಣಿಗಳು ಕಂಡುಬಂದರೆ, ತಕ್ಷಣ ವರದಿ ಮಾಡಲು ಭದ್ರತಾ ಪಡೆಗಳು ಮೀನುಗಾರರಿಗ ತಿಳಿಸಿದೆ.
ಕಾರವಾರ ಕರಾವಳಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ದೊಡ್ಡ ದೋಣಿ ನಿರ್ವಾಹಕರಿಗೆ ಮಾಹಿತಿ ನೀಡಲಾಯಿತು. ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ನೀರು ಕಾರವಾರ ಕರಾವಳಿಯಿಂದ 250 ಕಿ.ಮೀ ದೂರದಲ್ಲಿದೆ ಮತ್ತು ದೊಡ್ಡ ದೋಣಿಗಳನ್ನು ಅಂತರರಾಷ್ಟ್ರೀಯ ಗಡಿಗಳಿಂದ ದೂರವಿರಲು ತಿಳಿಸಲಾಗಿದೆ” ಎಂದು ಕಾರವಾರದ ಮೀನುಗಾರಿಕಾ ಟ್ರಾಲರ್ ನಿರ್ವಾಹಕರು ಹೇಳಿದರು.