ಅರಿವಿನ  ಗವಿಯಲ್ಲಿ ಹಡಪದ ಅಪ್ಪಣ್ಣ ಮೂರ್ತಿಯನ್ನು ಪುನಃ ಸ್ಥಾಪಿಸಿ : ಹೆಚ್  ಶಿಕುಮಾರ್ ಆಗ್ರಹ 

MK HasiruKranti
ಅರಿವಿನ  ಗವಿಯಲ್ಲಿ ಹಡಪದ ಅಪ್ಪಣ್ಣ ಮೂರ್ತಿಯನ್ನು ಪುನಃ ಸ್ಥಾಪಿಸಿ : ಹೆಚ್  ಶಿಕುಮಾರ್ ಆಗ್ರಹ 
WhatsApp Group Join Now
Telegram Group Join Now
 ಬಳ್ಳಾರಿ ಏ 08. : ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ  ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿತ್ತು, ಆದರೆ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಹಸ್ತಕ್ಷೇಪ ಮಾಡಿ ಶಿವಶರಣ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಅನ್ಯ ಶರಣರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಖಂಡನೀಯ ವಿಷಯ, ಈ ಪಂಚ ಕಮಿಟಿಯವರ ಈ ನಿರ್ಧಾರ ರಾಜ್ಯದ ಎಲ್ಲಾ ಹಡಪದ ಅಪ್ಪಣ್ಣ ಸಮಾಜಕ್ಕೆ  ನೋವುಂಟು ಮಾಡಿರುತ್ತದೆ, ಮೊದಲಿದ್ದಂತೆ ಅರುವಿನ ಗವಿಯಲ್ಲಿ ಪುನಃ ಯಥವತ್ತಾಗಿ ಶಿವಶರಣ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಸ್ಥಾಪಿಸಿ ಅಪ್ಪಣ್ಣ ಸಮಾಜದವರಿಗೆ  ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ಶಿವಶರಣ  ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್ ಶಶಿಕುಮಾರ್ ಆಗ್ರಹಿಸಿದರು.
 ಈ ಕುರಿತು ಅವರಿಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ರವಾನಿಸಿ ಮಾತನಾಡಿ, ಬಸವಕಲ್ಯಾಣದ  ಪಂಚ ಕಮಿಟಿಯವರ ನಿರ್ಧಾರ ಹಡಪದ ಅಪ್ಪಣ್ಣ ಸಮಾಜಕ್ಕೆ ನೋವು ತಂದಿದೆ, ಹಡಪದ ಅಪ್ಪಣ್ಣನವರು ವಿಶ್ವಗುರು ಸಾಂಸ್ಕೃತಿಕ ನಾಯಕ ಎಂದು ಹೆಸರಾದ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು ಈ ಸ್ಮರಣಾರ್ಥವಾಗಿ   ಅಪ್ಪಣ್ಣನವರ ಮೂರ್ತಿಯನ್ನು ಅರಿವಿನ ಗವಿಯಲ್ಲಿ ಪ್ರತಿಷ್ಠಾಪಿಸಲಾಗಿತ್ತು ಆದರೆ ಇತ್ತೀಚಿಗೆ ಪಂಚ ಕಮಿಟಿ ಸದಸ್ಯರು ಹಡಪದ ಅಪ್ಪಣ್ಣನವರ ಮೂರ್ತಿಯನ್ನು ತೆರವುಗೊಳಿಸಿದ್ದಾರೆ, ಈ ವಿಷಯದ ಕುರಿತು ಸಂಬಂಧಿಸಿದ ಅಧಿಕಾರಿಗಳು  ತಕ್ಷಣ ಕ್ರಮ ಕೈಗೊಂಡು ಮೊದಲಿದ್ದಂತೆ ಅದೇ ಸ್ಥಳದಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಮ್ಮ ಜನಾಂಗಕ್ಕೆ ನ್ಯಾಯ ಕೊಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು.
 ಈ ವಿಷಯದ ಕುರಿತು ಈಗಾಗಲೇ ಅನೇಕ ಬಾರಿ  ಮಠಾಧೀಶರು ಸಮಾಜದ ನಾಯಕರು ಹಡಪದ ಅಪ್ಪಣ್ಣ ಪರವಾಗಿ ಹಲವಾರು ಬಾರಿ ಮನವಿ ಮಾಡಿ ಹೋರಾಟ ನಡೆಸಿದರು ಇನ್ನು ನಮಗೆ ನ್ಯಾಯ ಸಿಕ್ಕಿರುವುದಿಲ್ಲ ಕಾರಣ ಆದಷ್ಟು ಶೀಘ್ರದಲ್ಲಿ ಅರಿವಿನ ಗವಿಯಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕೆಂದರು.
 ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಶ್ರೀ ಶಿವಶರಣ  ಹಡಪದ ಅಪ್ಪಣ್ಣ  ಸಮಾಜ ಸೇವಾ ಸಂಘದ  ಜಿಲ್ಲಾಧ್ಯಕ್ಷ ಎಚ್ ರುದ್ರಪ್ಪ , ಜಿಲ್ಲಾ ಸಂಚಾಲಕ ಎಚ್ ಅಮರೇಶ್, ತಾಲೂಕ ಅಧ್ಯಕ್ಷ ಎಚ್ ಶಿವರಾಜ್ ಜಿಲ್ಲಾ ಪ್ರತಿನಿಧಿ ಎಚ್ ಸದಾಶಿವ ಸೇರಿದಂತೆ ಹಲವಾರು ಜನ ಹಡಪದ ಅಪ್ಪಣ್ಣ ಸಮಾಜದ ಜನರಿದ್ದರು.
WhatsApp Group Join Now
Telegram Group Join Now
Share This Article