ಬೈಲಹೊಂಗಲ: ಜೀವನದಲ್ಲಿ ಉನ್ನತಸ್ಥಾನಮಾನ ಗಳಿಸಲು ಗುರುಗಳ ಮಾರ್ಗದರ್ಶನ ಮುಖ್ಯ, ಜೀವನದಬಗುರಿನಸಾಧನೆಗೆ ಗುರುದಾರಿದೀಪ ಎಂದು ವಿಶ್ರಾಂತ ಪ್ರಧಾನ ಶಿಕ್ಷಕ ಡಿ.ಎನ್.ಮಾಸ್ತಾಮ್ಮನವರ ಹೇಳಿದರು.
ಸಮೀಪದ ಹೊಸೂರ ಗ್ರಾಮದ ಎಸ್.ಎನ್.ವಿ.ವಿ.ಎಸ್.ಸಂಸ್ಥೆಯ 2004-05ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಮರಡಿಬಸವೇಶ್ವರ ಸಭಾಭವನದಲ್ಲಿ ರವಿವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ, ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯವಾಗಲು ಉತ್ತಮ ಶಿಕ್ಷಕರ ಅಗತ್ಯವಿದೆ ಎಂದರು. ಅಂಗನವಾಡಿ ಶಿಕ್ಷಕಿಯರು ಮಕ್ಕಳಲ್ಲಿರುವ ಪ್ರಾಥಮಿಕ ಹಂತದ ಭಯವನ್ನು ಹೋಗಲಾಡಿಸಿ ಶಿಕ್ಷಣಕ್ಕೆ ತಯಾರು ಮಾಡುವ ಉನ್ನತಸೇವೆ
ನೀಡುತ್ತಾರೆ. ಶಾಲಾ ಶಿಕ್ಷಕರು ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ಸಾಕಿಸಲಹುತ್ತಾರೆ ಎಂದರು.
ಗುರುವಂದನಾ ಕಾರ್ಯಕ್ರಮದಲ್ಲಿ 2004-05 ನೇ ಸಾಲಿನ ವಿಧ್ಯಾರ್ಥಿಗಳಿಗೆ ಭೊದನೆ ಮಾಡಿದ್ದ ವಿಜ್ಞಾನ ಶಿಕ್ಷಕ ಎಫ್.ಎಸ್. ಸಿದ್ದನಗೌಡರ ಮಾತನಾಡಿ,ಭಾರತ ಗುರುಪರಂಪರೆಯ ದೇಶ, ಗುರುಗಳಿಗೆ ಇದ್ದಷ್ಟು ಗೌರವ ಯಾವುದೆ ಉನ್ನತವಾದ ಹುದ್ದೆಗೂ ಇಲ್ಲ. ಗುರುಗಳು ನಮ್ಮ ಕಣ್ಣಿಗೆ ಕಾಣುವ ಮಾತೃದೇವರು. ಶಿಕ್ಷಣದ ಜೋತೆಗೆ
ರಾಷ್ಟ್ರನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ತಾವು ಮಾಡುವ ಕೈಂಕರ್ಯವೇ ದೊಡ್ಡ ಪುರಸ್ಕಾರ. ವಿದ್ಯಾರ್ಜನೆ ಮಾಡಿ 20ವರ್ಷಗಳ ನಂತರ ಕಲಿಸಿದ ಗುರುಗಳನ್ನು ನೆನಪಿಸಿ ಸತ್ಕರಿಸಿದ ವಿದ್ಯಾರ್ಥಿಗಳ ಕಾರ್ಯ ಉತ್ತಮ ಶಿಕ್ಷಕರಿಗೆ ಸಂದ ಗೌರವವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ಇಂದಿನ ಕಾಲದ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದ್ದು ಸಮಾನತೆಯ ಸಹಬಾಳ್ವೆಯ ಕಳಂಕ ರಹಿತ ಸಮಾಜ ನಿರ್ಮಾಣಕ್ಕೆ ಅನಿಯಾಗಲಿದೆ ಎಂದರು.
ಕಾರ್ಯಕ್ರಮದ ಮುಂಚೆ ಎಲ್ಲಾ ಶಿಕ್ಷಕರು ವರ್ಗಭೊದನೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ 20ವರ್ಷದ ಹಿಂದಿನ ವಿದ್ಯಾರ್ಥಿ ಜೀವನ ನೆನೆದು ಕಲಿತ ಶಾಲೆಯ ಹಳೆಯ ನೆನಪು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಡಿ.ಎನ್.ಉಪಾಧ್ಯಾಯ, ಜಿ.ಎಸ್.ಬೋಳೆತ್ತಿನ,ಈರಣ್ಣ ಬೆಂಡಿಗೇರಿ, ರವಿ ವಕ್ಕುಂದ, ರವಿ ಕೊಲಕಾರ, ಶಿಕ್ಷಕಿಯರಾದ ರತ್ನಾ ಮುಗಬಸವ ರೇಖಾ ಹಿರೆಮಠ, ಹೊಂಗಲಮಠ, ಕಂಬಾರ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಉಮೇಶ ಮೆಳವೆಂಕಿ, ಮೂಗಪ್ಪ ಹುದಲಿ, ವಿನಯ ಬೆಂಡಿಗೇರಿ, ಸೋಮು ವಿವೇಕಿ, ಸೋಮಪ್ಪ ಸಂಗೋಳ್ಳಿ, ಮಹಾಂತೇಶ ಪೆಂಟೆದ, ರವಿ ಬ್ಯಾಳಿ, ಉಮಾ ಹುದಲಿ, ಸವಿತಾ ಮಸಗುಪ್ಪಿ, ರೇಣುಕಾ ಮತ್ತಿಕೊಪ್ಪ, ರಾಧಾ ಹುಡೇದ, ಶ್ರೀದೇವಿ ಹುಂಬಿ, ಲಕ್ಷ್ಮೀ ಸಂಗೋಳ್ಳಿ, ಶಕುಂತಲಾ ಪಾಟೀಲ, ಶೋಭಾ ಇಂಗಳಗಿ ಶೈಲಾ ಇಂಗಳಗಿ, ಯಲ್ಲವ್ವ ಗುಳನ್ನವರ ಸೇರಿದಂತೆ ನುರಾರು ವಿದ್ಯಾರ್ಥಿಗಳು ಇದ್ದರು.