ವಿಜಯಪುರ – ದಿ. ೨೮-೬-೨೦೨೫ ರಂದು ಶನಿವಾರ ನಗರದ ಪ್ರಖ್ಯಾತ ಶಿಕ್ಷಣ ಮಹಾವಿದ್ಯಾಲಯ ಶ್ರೀ ಜಗಜ್ಯೋತಿ ಬಸವೇಶ್ವರ ಸಂಘದ ಶಿಕ್ಷಣ ಮಹಾವಿದ್ಯಾಲಯ ಪುಲಕೇಶಿ ನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ನಿಂದ ವಿವಿಧ ವಿಷಯಗಳನ್ನು ಕಾರ್ಯಾಗಾರದ ಮೂಲಕ ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಲ್.ಬಿ. ಪಾಟೀಲ ಅಧ್ಯಕ್ಷರು ಶ್ರೀ ಜ.ಬಿ.ವಿ. ಸಂಘ ವಿಜಯಪುರ ಉದ್ಘಾಟಕರಾದ ಎಸ್.ಪಿ. ಜಾಧವ ಪ್ರಾಚಾರ್ಯರು ಎಸ್.ಎಂ.ಕೆ.ಬಿ.ಪಿ. ಪದವಿ ಕಾಲೇಜ ವಿಜಯಪುರ ಪ್ರಾಸ್ತಾವಿಕ ನುಡಿಗಳನ್ನು ನಿಂಗರಾಜ ಮನಗೂಳಿ ಜಿಲ್ಲಾ ಸಂಚಾಲಕರು ರಾಷ್ಟ್ರೋತ್ಥಾನ ಪರಿಷತ್ ಮುಖ್ಯ ಅತಿಥಿಗಳು ಉಪನ್ಯಾಸಕರಾಗಿ ಡಾ. ಸತೀಶಗೌಡ ಸಹಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನ್ನೂರ ಇವರ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ. ದೀಪಕ ಬಡಿಗೇರ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳು ಇವರು ಭಾರತೀಯ ಶಿಕ್ಷಣ ಪದ್ದತಿ, ಅಶೋಕ ಹಂಚಲಿ ವಾಗ್ಮೀ, ಚಿಂತಕರು, ಲೇಖಕರು ಸಾಹಿತಿಗಳು ಇವರು ಶಿಕ್ಷಣದ ಪರಿಕಲ್ಪನೆ ಮತ್ತು ಆದರ್ಶ ಶಿಕ್ಷಣ ಹೀಗೆ ಅನೇಕ ವಿಷಯಗಖು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಮಹಾನಂದಾ ಬಿ. ದೊಡ್ಡಣ್ಣವರ ಪ್ರಾಚಾರ್ಯರು ಇವರು ಕಾರ್ಯಕ್ರಮದ ಗಣ್ಯರಿಗೆ ಉಪನ್ಯಾಸಕರಿಗೆ ಉಪನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಪ್ರೊ. ಕೇಶವ ಜೆ. ಪ್ರೊ. ಮಂಜುನಾಥ ಅಂದವಗೋಳ, ಡಾ. ಎಸ್.ಎಸ್. ಹುಬ್ಬಿ, ಪ್ರಶಿಕ್ಷಣಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.