ನೊಂದ ಜನಕ್ಕೆ ನೆರವು ನೀಡಿ, ಬಡ ಕುಟುಂಬಗಳ ಅಭಿವೃದ್ಧಿಗೆ ಶಕ್ತಿನೀಡಿದ ಗ್ಯಾರಂಟಿ ಯೋಜನೆ: ಸಚಿವ ಆರ್ ಬಿ ತಿಮ್ಮಾಪುರ

Pratibha Boi
ನೊಂದ ಜನಕ್ಕೆ ನೆರವು ನೀಡಿ, ಬಡ ಕುಟುಂಬಗಳ ಅಭಿವೃದ್ಧಿಗೆ ಶಕ್ತಿನೀಡಿದ ಗ್ಯಾರಂಟಿ ಯೋಜನೆ: ಸಚಿವ ಆರ್ ಬಿ ತಿಮ್ಮಾಪುರ
WhatsApp Group Join Now
Telegram Group Join Now

ರನ್ನ ಬೆಳಗಲಿ:ಅ.೧೮., ಪಟ್ಟಣದ ಶ್ರೀ ಬಂದಲಕ್ಷ್ಮೀ ದೇವಸ್ಥಾನ ಆವರಣದಲ್ಲಿರುವ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಸಭಾಭವನದಲ್ಲಿ ಶನಿವಾರ ದಂದು ಪೌರಾಡಳಿತ ನಿರ್ದೇಶನಲಯ ಬೆಂಗಳೂರು, ಜಿಲ್ಲಾ ಆಡಳಿತ ಬಾಗಲಕೋಟೆ, ತಾಲೂಕಾ ಆಡಳಿತ ಮುಧೋಳ ಮತ್ತು ಪಟ್ಟಣ ಪಂಚಾಯತ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು ಕೊರತೆ ಸಭೆ ಜರುಗಿತು.

ಆರ್ ಬಿ ತಿಮ್ಮಾಪುರ ಅಬಕಾರಿ,ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಧೋಳ ಮತ ಕ್ಷೇತ್ರದ ಶಾಸಕರು ಕಾರ್ಯಕ್ರಮ ಉದ್ಘಾಟಿಸಿ, ನೊಂದ ಜನಕ್ಕೆ ನೆರವು ನೀಡಿ, ಬಡ ಕುಟುಂಬಗಳ ಅಭಿವೃದ್ಧಿಗೆ ಶಕ್ತಿನೀಡಿದ ಗ್ಯಾರಂಟಿ ಯೋಜನೆ ನಾಡಿನ ಅಸಂಖ್ಯಾತ ಬಡ ಕುಟುಂಬಗಳಿಗೆ ವರದಾನವಾಗಿವೆ. ಅನ್ನ ಭಾಗ್ಯದಿಂದ ಬಡವರ ಹಸಿವು ಇಂಗಿದೆ. ಮುಂದಿನ ದಿನಗಳಲ್ಲಿ ಅಕ್ಕಿಯ ಜೊತೆಗೆ ದಿನಬಳಕೆಯ ವಸ್ತುಗಳನ್ನು ಕೊಡುವ ಸಂಕಲ್ಪವಿದೆ. ಗ್ರಹ ಜ್ಯೋತಿಯಿಂದ ವಿದ್ಯಾರ್ಥಿಗಳ ಓದಿಗೆ ಬೆಳಕನ್ನು ನೀಡಿ, ಯುವನಿಧಿಯಿಂದ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜಾಗಲು ಪ್ರೋತ್ಸಾಹ ನೀಡುತ್ತಿದ್ದೇವೆ. ಶಕ್ತಿ ಯೋಜನೆ ಅಸಂಖ್ಯಾತ ಮಹಿಳೆಯರ ದಿನನಿತ್ಯದ ಔದ್ಯೋಗಿಕ ಚಟುವಟಿಕೆಗೆ ಬಲ ನೀಡಿದೆ. ಗೃಹಲಕ್ಷ್ಮೀ ಯಿಂದ ಎಲ್ಲಾ ತಾಯಂದಿರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಕುಟುಂಬದ ನಿರ್ವಹಣೆಯನ್ನು ಮಾಡುತ್ತಾ ಸಾವಲಂಬಿ ಜೀವನಕ್ಕೆ ಬದ್ಧರಾಗಿದ್ದಾರೆ. ಈ ಐದು ಗ್ಯಾರಂಟಿ ಯೋಜನೆಗಳಿಂದ ಮೂಲಭೂತ ಅವಶ್ಯಕತೆಗಳನ್ನು ಎಲ್ಲಾ ಜನತೆ ಪೂರೈಸಿಕೊಳ್ಳುವಂತಾಗಿದೆ. ನಮ್ಮ ಸರ್ಕಾರ ಬಡ ಜನರಿಗೆ ಸ್ವಾಭಿಮಾನದ ಬದುಕು ನೀಡಿದ ಕಾಂಗ್ರೆಸ್ ಸರ್ಕಾರ. ಗ್ಯಾರೆಂಟಿ ಯೋಜನೆಗಳಿಗೆ ಬಲ ತುಂಬುವುದರ ಜೊತೆಗೆ ರಸ್ತೆಗಳ ಅಭಿವೃದ್ಧಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ನೀಡುವುದರಲ್ಲಿ ಕೂಡ ಸರಕಾರ ಮಂಚೂರಿಯಲಿದೆ. ಆದರೂ ಈ ಗ್ಯಾರಂಟಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುವ ಜನರಿಗೆ ಫಲಾನುಭವಿಗಳೆ ಉತ್ತರಿಸಬೇಕು ಎಂದು ತಿಳಿಸಿದ ಸಚಿವರು. ಸಾರ್ವಜನಿಕರ ಜೊತೆಗೆ ನೇರವಾಗಿ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಯಾರು ಯೋಜನೆಯಿಂದ ವಂಚಿತರಾಗಿದ್ದಾರೋ ಅವರಿಗೆ ಒಂದು ವಾರದ ಒಳಗೆ ಪರಿಹಾರ ಒದಗಿಸಿ ಅವರು ಕೂಡ ಯೋಜನೆ ಲಾಭವನ್ನು ಪಡೆಯುವಂತಾಗಬೇಕೆಂದು ಅಧಿಕಾರಿಗಳ ವರ್ಗಕ್ಕೆ ತಿಳಿಸಿದರು.

ಮಹೇಶ ಬಿಳೂರ ತಾಲೂಕ ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯ ನಿಮ್ಮ ಮನೆಯ ಬಾಗಿಲಿಗೆ ನಮ್ಮ ಸರ್ಕಾರದ ಕಲ್ಯಾಣ ಕಾರ್ಯಗಳೇ ಗ್ಯಾರಂಟಿ, ಯೋಜನೆ ಭಾಗ್ಯವನ್ನು ನೀಡಿದೆ. ಪ್ರತಿ ವ? ಈ ೫ ಗ್ಯಾರಂಟಿಗಳಿಗಾಗಿ ಗಣ ಸರ್ಕಾರ ೫೬ ಸಾವಿರ ಕೋಟಿ ಮೊತ್ತವನ್ನು ಒದಗಿಸುತ್ತಿದೆ. ಇದರ ಶಕ್ತಿ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಲತಾಯಿಯ ಧೋರಣೆಯನ್ನು ತೋರುತ್ತಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ಅತಿ ಕಡಿಮೆ ತೆರಿಗೆ ಕಟ್ಟುವ ಉತ್ತರ ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದ ಅನುದಾನ ನೀಡುವ ಕೇಂದ್ರ ಸರ್ಕಾರ. ಆದರೂ ಸರ್ಕಾರ ಸಮರ್ಪಕವಾಗಿ ಎಲ್ಲಾ ಯೋಜನೆಗಳನ್ನು ನಿರ್ವಹಿಸುತ್ತಾ,ನಾಡಿನ ಅಭಿವೃದ್ಧಿಯಲ್ಲಿ ಕೂಡ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯತ ಅಧ್ಯಕ್ಷೆ ರೂಪಾ ಹೊಸಟ್ಟಿ, ತಾಲೂಕಾ ಗ್ಯಾರಂಟಿ ಯೋಜನೆ ಸಮೀತಿ ಅಧ್ಯಕ್ಷ ಮಹಾಂತೇಶ ಮಾಚಕನೂರ,ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ,ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ,ಉದಯ ಸರವಾಡ,
ಪ್ರವೀಣ ಪಾಟೀಲ, ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರು,ಯಮನಪ್ಪ ದೊಡಮನಿ,ನೀಲಕಂಠ ಸೈದಾಪುರ, ಮುತ್ತಪ್ಪ ಸಣ್ಣಟ್ಟಿ, ಮುಬಾರಕ ಅತ್ತಾರ, ಮುತ್ತಪ್ಪ ನಾಯಕ,ಮಲ್ಲಪ್ಪ ಮಲಾವಡಿ, ಸದಾಶಿವ ಹಿಡಕಲ್ಲ, ಸಿದ್ದು ಮಾಳಿ,ಯಲ್ಲಪ್ಪ ದೋಬಸಿ,
ಶೋಭಾ ಜಿಗಜೀನ್ನಿ,ರಮೇಶ ಹೀರೊಳ್ಳಿ, ಹೊಳೆಬಸು ತೇಲಿ,ಶಿವಪ್ಪ ಡೊಳ್ಳಿ,ರಾಜ್ಮಾ ಬೇಪಾರಿ, ಸವಿತಾ ಚವಲಿ,ಮಹಾಲಿಂಗಪ್ಪ ಕೊಣ್ಣೂರ, ಶಿವಪ್ಪ ಮಂಟೂರ, ಚನ್ನಪ್ಪ ಜಾಲಿಕಟ್ಟಿ, ಹಣಮಂತ ಹೊರಟ್ಟಿ, ಅಶೋಕ ಪಾಟೀಲ,ಅಧಿಕಾರಿಗಳಾದ ವಿ ಎನ್ ಬಂಗಾರಪ್ಪನವರ ಸಿ ಡಿ ಪಿ ಓ, ವಿ ಎನ್ ಮರಕಟ್ಟಿ ಎ ಇ ಇ ಹೆಸ್ಕಾಂ, ಬಿ ಡಿ ದೇಶಪಾಂಡೆ ತಾಲೂಕ ಆಹಾರ ನಿರೀಕ್ಷಕರು, ಗುರುಪಾದಯ್ಯ ಹಿರೇಮಠ ಡಿ ಎಸ್ ಡಿ ಓ, ವಿದ್ಯಾ ನಾಯಕ ಕೆಎ???ರ್‌ಟಿಸಿ ಘಟಕ ವ್ಯವಸ್ಥಾಪಕರು ಮುಧೋಳ, ರಾಘವೇಂದ್ರ ನೀಲಣ್ಣವರ ಪತ್ರಕರ್ತರು ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

WhatsApp Group Join Now
Telegram Group Join Now
Share This Article