ಕೆಎಂಎಫ್‌ನಿಂದ ರೈತರಿಗೆ ಗುಡ್‌ನ್ಯೂಸ್‌; ಅಕ್ಟೋಬರ್‌ 1 ರಿಂದ ಹಾಲಿನ ಖರೀದಿ ದರ ಹೆಚ್ಚಳ!

Ravi Talawar
ಕೆಎಂಎಫ್‌ನಿಂದ ರೈತರಿಗೆ ಗುಡ್‌ನ್ಯೂಸ್‌; ಅಕ್ಟೋಬರ್‌ 1 ರಿಂದ ಹಾಲಿನ ಖರೀದಿ ದರ ಹೆಚ್ಚಳ!
WhatsApp Group Join Now
Telegram Group Join Now
ರೈತರಿಗೆ ಕೆಎಂಎಫ್‌ ಗುಡ್‌ನ್ಯೂಸ್‌ ನೀಡಿದೆ. ಅಕ್ಟೋಬರ್‌ ಒಂದನೇ ತಾರೀಖಿನಿಂದ ಹಾಲು ಉತ್ಪಾದಕರಿಗೆ ಲೀಟರ್‌ಗೆ 1.5 ರೂ. ನೀಡಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಎಸ್‌.ಭೀಮ ನಾಯ್ಕ್‌ ಹೇಳಿದರು.
ರಾಯಚೂರು, ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾಹಾಲು ಉತ್ಪಾದಕರ ಸಹಕಾರಿ ಸಂಘ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
” ಹಾಲಿನ ದರ ಏರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದು, ಸರಕಾರ ರೈತರ ಪರವಾಗಿ ಇದೆ. ರೈತರಿಂದಲೇ ಹಾಲು ಒಕ್ಕೂಟಗಳ ನಡೆಸುತ್ತಿರುವುದು. ಆದರಿಂದ ರೈತರಿಂದ ಪಡೆಯುವ ಹಾಲಿನ ಖರೀದಿ ದರವನ್ನು ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ಅಕ್ಟೋಬರ್‌ 1 ರಿಂದ 1.50 ರೂಪಾಯಿ ಹಾಲು ಉತ್ಪಾದಕರಿಗೆ ನೀಡಲಾಗುವುದು ” ಎಂದು ಸಭೆಗೆ ಮಾಹಿತಿ ನೀಡಿದರು.
WhatsApp Group Join Now
Telegram Group Join Now
Share This Article