ಬಳ್ಳಾರಿ ಜುಲೈ 01. ಬಳ್ಳಾರಿ ನಗರದ ಡಿಸಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಜಿಕೆ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿಕೆ ಸ್ವಾಮಿ (ವಿಜಯ್) ತಮ್ಮ ಸ್ವಂತ ಖರ್ಚಿನಲ್ಲಿ ಬಹಳ ಜನ ಪತ್ರಕರ್ತರಿಗೆ ಅಂಚೆ ಕಚೇರಿಯ ಅಪಘಾತ ವಿಮೆ ವಿತರಿಸಿದರು. ಈ ಸಂದರ್ಭದಲ್ಲಿ ಜಿಕೆ ಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರಿಗೆ ಹತ್ತರಿಂದ ಇಪ್ಪತ್ತು ಸಾವಿರ ರೂಪಾಯಿಗಳ ಆರೋಗ್ಯ ವಿಮೆಯನ್ನು ಮಾಡಿಸಿಕೊಡುತ್ತೇನೆ, ನಾನು ಜೀವಂತ ಇರುವರಿಗೆ ಈ ಎರಡು ವಿಮೆಗಳನ್ನು ನವೀಕರಣ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಯಾಳ್ಪಿ ವಲಿ ಭಾಷಾ, ರವಿಕುಮಾರ್, ಪಂಪನಗೌಡ. ದುರ್ಗೇಶ್ ಯಾದವ್, ಬಜಾರಪ್ಪ ವೆಂಕಟೇಶ್ ದೇಸಾಯಿ ರಘುರಾಮ್ ಸೇರಿದಂತೆ ಇತರರಿದ್ದರು.