ಶಿಕ್ಷಕರಿಗೆ ವಿನಯಪೂರ್ವಕ ಗೌರವ ಕೊಡಿ: ಬಾಳಾಸಾಹೇಬ ದೇಸಾಯಿ

Ravi Talawar
ಶಿಕ್ಷಕರಿಗೆ ವಿನಯಪೂರ್ವಕ ಗೌರವ ಕೊಡಿ: ಬಾಳಾಸಾಹೇಬ ದೇಸಾಯಿ
WhatsApp Group Join Now
Telegram Group Join Now

ನೇಸರಗಿ: ಶಿಕ್ಷಕರೇ ವಿದ್ಯಾರ್ಥಿಗಳ ಬಾಳಿನ ಬೆಳಕಾಗಿ ಅವರ ಭವಿಷ್ಯದ ಬೆಳವಣಿಗೆಗೆ ಕಾರಣಿಭೂತರು ಅದಕ್ಕಾಗಿ ವಿನಯದಿಂದ ಶಿಕ್ಷಕರಿಗೆ ಗೌರವ ಕೊಡಬೇಕೆಂದು ಬೈಲಹೊಂಗಲ ಟಿ ಎ ಪಿ ಸಿ ಎಮ್ ಎಸ್ ಹಾಗೂ ವಣ್ಣೂರ ಪಿಕೆಪಿಸ್ ಅಧ್ಯಕ್ಷರಾದ ಬಾಳಾಸಾಹೇಬ ದೇಸಾಯಿ ಹೇಳಿದರು.

ಅವರು ಸಮೀಪದ ವಣ್ಣೂರ ಗ್ರಾಮದ ಪಿ ಯು ಕಾಲೇಜಿನಲ್ಲಿ ಗುರುವಾರದಂದು ನಡೆದ ಶಿಕ್ಷಕರ ದಿನಾಚರಣೆ ಮತ್ತು ಪ್ರಥಮ ಪಿ ಯು. ವಿದ್ಯಾರ್ಥಿಗಳ ಸ್ವಾಗತ, ಸಾoಸ್ಕೃತಿಕ, ಕ್ರೀಡಾ ಸಮಾರಂಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ. ಪಂ ಅಧ್ಯಕ್ಷ ಶ್ರೀಮತಿ ಮಂಜುಳಾ ಹೊನ್ನನಾಯಕ. ಪಾಟೀಲ,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸತ್ಯನಾಯ್ಕ ಎಫ್. ನಾಯಕ, ಡಿ ಎಸ್ ಎಸ್ ರಾಜ್ಯ ಪ್ರದಾನ ಮನೋಜ ಕೆಳಗೇರಿ,ಸುಧಾರಣೆ ಸಮಿತಿ ಸದಸ್ಯರಾದ ವಿಠ್ಠಲ ಸೊರಣ್ಣವರ, ಹಣಮಂತ ದೊಡ್ಡನವರ, ಪ್ರಾಚಾರ್ಯರಾದ ರಾಜು ಎಸ್. ಬಸಣ್ಣವರ, ಉಪನ್ಯಾಸಕರಾದ ಎ ಬಿ. ಮಿರಜಕರ, ಬಿ ಎಸ್. ದೇಗಾನಟ್ಟಿ, ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article