ಬಳ್ಳಾರಿ ಜುಲೈ 29. ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಗೊಬ್ಬರದ ಅಭಾವವಿದ್ದು, ರೈತರಿಗೆ ಸಮರ್ಪಕವಾಗಿ ಗೊಬ್ಬರವನ್ನು ಪೂರೈಸಲು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ರೈತ ಮೋರ್ಚಾ ವತಿಯಿಂದ ಹಳೆಯ ತಾಲ್ಲೂಕು ಕಛೇರಿ ಕಾಪೌಂಡ್ನಲ್ಲಿರುವ ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ. ಕಛೇರಿಯ ಮುಂದೆ ದಿನಾಂಕ: 31-07-2025 ರಂದು ಬೆಳಿಗ್ಗೆ 10.00 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಪಕ್ಷದ ಮುಖಂಡರು ರೈತ ಮುಖಂಡರು, ರೈತರು ಭಾಗವಹಿಸಿ ಪ್ರತಿಭಟನೆಯನ್ನ ಯಶಸ್ವಿಗೊಳಿಸಬೇಕಾಗಿ ಗಣಪಾಲ ಐನಾಥರೆಡ್ಡಿ, ಜಿಲ್ಲಾಧ್ಯಕ್ಷರು, ಬಿ.ಜೆ.ಪಿ. ರೈತ ಮೋರ್ಚಾ, ಬಳ್ಳಾರಿ ಜಿಲ್ಲೆ ಇವರು ಕಳಕಳಿಯ ವಿನಂತಿಯನ್ನು ಮಾಡಿದ್ದಾರೆ.